ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದು, ಈ ಬಜೆಟ್ ಹಸಿದವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡಂತೆ ಎಂದು ಹೇಳಿದ್ದಾರೆ.
ರಾಮನಗರದ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ನಲ್ಲಿ ಜಿಲ್ಲಾವಾರು ನೀರಾವರಿ ಯೋಜನೆಗಳನ್ನು ಜೋಡಿಸುವ ಬಗ್ಗೆ ಹೇಳಲಾಗಿದೆ.ಆದರೆ ಅವುಗಳು ಎಷ್ಟರ ಮಟ್ಟಿಗೆ ಕಾರ್ಯಾರಂಭಕ್ಕೆ ಬರುತ್ತದೆ ಅನ್ನೋದನ್ನು ನೋಡಬೇಕು ಎಂದರು.
ಟ್ಯಾಕ್ಸ್ಗಳನ್ನು ಏರಿಕೆ ಮಾಡಿಲ್ಲ, ಅನ್ನೋದನ್ನು ಬಿಟ್ಟರೆ, ಆರ್ಥಿಕತೆ ಸುಧಾರಣೆ ಬಗ್ಗೆ ಯಾವ ಕ್ರಮಕೈಗೊಂಡಿಲ್ಲ. ಎಂದು ಕುಮಾರಸ್ವಾಮಿ ಹೇಳಿದರು.