ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇತ್ತೀಚೆಗೆ ತಮ್ಮ ಆರೋಗ್ಯಕರ ಜೀವನಶೈಲಿ ಮತ್ತು ಫಿಟ್ನೆಸ್ ದಿನಚರಿಯಿಂದ ಗಮನ ಸೆಳೆಯುತ್ತಿದ್ದಾರೆ. ನೆಲ್ಲೂರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ಆಹಾರ ಪದ್ಧತಿ ಮತ್ತು ಆರೋಗ್ಯ ನಿರ್ವಹಣೆಯ ವಿಶೇಷ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಅನ್ನಕ್ಕೆ ಗುಡ್ಬೈ ಹೇಳಿದ ಸಿಎಂ
ಚಂದ್ರಬಾಬು ನಾಯ್ಡು ತಮ್ಮ ದೈನಂದಿನ ಆಹಾರದಲ್ಲಿ ಬಿಳಿ ಅನ್ನದ ಪ್ರಮಾಣವನ್ನು ಸಂಪೂರ್ಣ ಕಡಿಮೆ ಮಾಡಿರುವುದಾಗಿ ತಿಳಿಸಿದ್ದಾರೆ. ಈಗ ಅವರು ಮುಖ್ಯವಾಗಿ ಪ್ರೋಟೀನ್ಯುಕ್ತ ಆಹಾರಕ್ಕೆ ಆದ್ಯತೆ ನೀಡುತ್ತಿದ್ದು, ಮೀನು ಸೇರಿದಂತೆ ಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ.
ಇದನ್ನೂ ಓದಿ:
ಪ್ರೋಟೀನ್ಗೆ ಹೆಚ್ಚಿನ ಒತ್ತು
ಪ್ರೋಟೀನ್ ಭರಿತ ಆಹಾರವು ದೇಹದ ಶಕ್ತಿ ಕಾಪಾಡುವುದರ ಜೊತೆಗೆ ಮಧುಮೇಹ ನಿಯಂತ್ರಣಕ್ಕೂ ಸಹಕಾರಿ ಎಂದು ಅವರು ಹೇಳಿದ್ದಾರೆ. ಜೊತೆಗೆ ಎಣ್ಣೆ ಮತ್ತು ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಆರೋಗ್ಯ ಟ್ರ್ಯಾಕಿಂಗ್ ರಿಂಗ್ ವಿಶೇಷತೆ
ನಾಯ್ಡು ತಮ್ಮ ಆರೋಗ್ಯದ ಮೇಲ್ವಿಚಾರಣೆಗೆ ವಿಶೇಷ ಸ್ಮಾರ್ಟ್ ರಿಂಗ್ ಬಳಸುತ್ತಿದ್ದಾರೆ. ಈ ಸಾಧನ ನಿದ್ರೆ, ದೈಹಿಕ ಚಟುವಟಿಕೆ ಹಾಗೂ ಪ್ರೋಟೀನ್ ಮಟ್ಟವನ್ನು ನಿರಂತರವಾಗಿ ಪರಿಶೀಲಿಸುತ್ತದೆ. ದೇಹದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಅಲರ್ಟ್ ನೀಡುತ್ತದೆ.
ಜನರಿಗೆ ಆರೋಗ್ಯ ಸಂದೇಶ
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಕಡಿಮೆ ಕಾರ್ಬೋಹೈಡ್ರೇಟ್ ಹಾಗೂ ಹೆಚ್ಚು ಪ್ರೋಟೀನ್ ಸೇವನೆಯ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.



