ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ನೀರಿಲ್ಲದ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯ ಜೊತೆಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ.
ಬೆಂಗಳೂರಿನಲ್ಲಿ ಕಾಲರಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಮಲ್ಲೇಶ್ವರಂನ ಪಿಜಿಯಲ್ಲಿದ್ದ ಯುವತಿಯೊಬ್ಬಳಿಗೆ ಕಾಲರಾ ಸೋಂಕು ದೃಢಪಟ್ಟಿದ್ದು, ಅದೇ ಪ್ರದೇಶದ ಇನ್ನೆರಡು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಾಲರಾದಿಂದ ಬಳಲಬಾರದು ಎನ್ನುವುದಾದರೆ ರಸ್ತೆ ಬದಿಯ ಆಹಾರಗಳಿಗೆ ಗುಡ್ಬೈ ಹೇಳಿ. ನೀರಿನ ಅಭಾವ ಇರುವ ಕಾರಣ ಶುದ್ಧ ನೀರಿನ ಬಳಕೆ ಮಾಡದೆ ಸ್ನ್ಯಾಕ್ಸ್ ತಯಾರಿ ಮಾಡಿರಬಹುದು.
ಕುಡಿಯುವ ನೀರಿನ ಶುದ್ಧತೆ ಬಗ್ಗೆ ಗಮನಹರಿಸಿ. ನೀರನ್ನು ಕುದಿಸಿ ಆರಿಸಿ ಕುಡಿಯಿರಿ
ಊಟಕ್ಕೂ ಮುನ್ನ ಸೋಪಿನಿಂದ ಕೈ ತೊಳೆಯುವುದು, ಬಾತ್ರೂಮಿನಿಂದ ಬರುವಾಗ ಕೈ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.
ಅರ್ಧಂಬರ್ಧ ಬೆಂದ ಆಹಾರ ಸೇವನೆ ಮಾಡಬೇಡಿ.