ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬೆಳ್ಳಿಪರ್ವ ಡಿ-25’ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್, ‘ಸಿನಿಮಾ, ರಾಜಕೀಯ, ವ್ಯಾಪಾರ ಯಾವುದೇ ಇರಲಿ ಪ್ರಯತ್ನ ಅಗತ್ಯ’ ಮೊದಲು ನೀವು ಅವಮಾನವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಅವಮಾನ ಒಂದು ಗೌರವ. ನೀವು ಚಪ್ಪಲಿಯಲ್ಲಿ ಹೊಡಿತ್ತೀರಾ, ಹೊಡೆಯಿರಿ. ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು. ಚಪ್ಪಲಿ ಹಾರ ಬಿದ್ದಾಗ ಅದನ್ನು ಒಪ್ಪಿಕೊಳ್ಳಬೇಕು. ನನಗಿಂತ ಹೆಚ್ಚು ವಿವಾದಾಕ್ಕೆ ಬಿದ್ದವರು ಯಾರೂ ಇಲ್ಲ.
ಹೌದು, ನಾನೊಬ್ಬ ಕೆಟ್ಟವನು. ಕಷ್ಟದ ಸಮಯದಲ್ಲಿ, ಮಾತುಗಳು ಬಹಳ ಕಹಿಯಾಗಿ ಇರುತ್ತದೆ. ಕೆಲವರಿಗೆ ಇದು ಒಪ್ಪಿಕೊಳ್ಳಲು ಆಗಲ್ಲ. ಕೌಟುಂಬಿಕ ಸಮಸ್ಯೆಗಳು, ಎಲ್ಲಾ ಸಮಸ್ಯೆಗಳನ್ನು ಬದಿಗಿಡಬೇಕು. ನನ್ನ ನಟನೆ, ನನ್ನ ವೃತ್ತಿ ಮುಖ್ಯ. “ನನ್ನ ಕೆಲಸ ನನಗೆ ಬಹಳ ಮುಖ್ಯ” ಎಂದು ಅವರು ಹೇಳಿದರು.