ಅಡಿಕೆ ಮರಗಳಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು: ಲಕ್ಷಾಂತರ ರೂ. ಬೆಳೆ ನಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾವಣಗೆರೆ ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ, ಬಾಳೆ ಗಿಡಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ವಿಶ್ವನಾಥ ಎಂಬುವವರಿಗೆ ಸೇರಿರುವ ತೋಟ ಇದಾಗಿದ್ದು, 1300 ಅಡಿಕೆ, 1400 ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ. ರೈತನ ಕುಟುಂಬ ಗ್ರಾಮದಲ್ಲಿ ಇಲ್ಲದಿರುವುದು ತಿಳಿದು ದುಷ್ಕರ್ಮಿಗಳು ದ್ವೇಷದಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿಗಳು ಅರ್ಧದಷ್ಟು ಅಡಿಕೆ ಮತ್ತು ಬಾಳೆ ತೋಟಗಳನ್ನು ಬೆಂಕಿಯಿಂದ ರಕ್ಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!