ಚೆಂಡನ್ನು ತಡೆಯುವ ಯತ್ನದಲ್ಲಿ ಪರಸ್ಪರ ಡಿಕ್ಕಿ: ಮೈದಾನದಲ್ಲಿ ನರಳಾಡಿದ ಲಂಕಾ ಆಟಗಾರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ವಿರುದ್ಧ ಶ್ರೀಲಂಕಾ ಆಡುತ್ತಿರುವ ವೇಳೆ ಭೀಕರ ಅವಘಡ ಸಂಭವಿಸಿದೆ. ಇಬ್ಬರು ಆಟಗಾರರು ಚೆಂಡನ್ನು ತಡೆಯುವ ಯತ್ನದಲ್ಲಿ (Sri Lankan fielders) ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಇಬ್ಬರೂ ಆಟಗಾರರನ್ನು ಸ್ಟ್ರೆಚರ್‌ (stretchers) ಮೇಲೆ ಮಲಗಿಸಿಕೊಂಡು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ.

ಟೀಂ ಇಂಡಿಯಾ ಇನ್ನಿಂಗ್ಸ್​ನ 43ನೇ ಓವರ್‌ ವೇಳೆ ಬೌಲರ್ ಕರುಣಾರತ್ನೆ ಲೆಗ್ ಸೈಡ್​ನಲ್ಲಿ ಎಸೆದ ಎಸೆತವನ್ನು ವಿರಾಟ್ ಕೊಹ್ಲಿ, ಡೀಪ್ ಮಿಡ್‌ವಿಕೆಟ್ ಮತ್ತು ಡೀಪ್ ಸ್ಕ್ವೇರ್ ಲೆಗ್ ನಡುವೆ ಆಡಿದರು. ಚೆಂಡು ಸೀದಾ ಬೌಂಡರಿ ಕಡೆ ಹೋಗುತ್ತಿತ್ತು. ಈ ವೇಳೆ, ಲಂಕಾದ ಇಬ್ಬರು ಆಟಗಾರರಾದ ಜೆಫ್ರಿ ವಾಂಡರ್ಸೆ ಮತ್ತು ಬಂಡಾರಾ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡರು. ಡಿಕ್ಕಿಯ ರಬಸಕ್ಕೆ ಇಬ್ಬರೂ ತೀವ್ರ ನೋವಿನಿಂದ ನರಳಲಾರಂಭಿಸಿದರು.

.ಈ ಅವಘಡದಲ್ಲಿ ವಂಡರ್ಸೆ ಅವರ ತಲೆಗೆ ತೀವ್ರ ನೋವಾದರೆ, ಬಂಡಾರ ಅವರ ಕಾಲಿಗೆ ಗಂಭೀರವಾಗಿ ಗಾಯವಾದಂತೆ ತೋರುತ್ತಿತ್ತು. ತಕ್ಷಣ ಅಲ್ಲಿಗೆ ಓಡಿ ಬಂದ ಶ್ರೀಲಂಕಾದ ಫಿಸಿಯೋ, ಈ ಇಬ್ಬರನ್ನು ಪರೀಕ್ಷಿಸಿದರು. ಇದೇ ವೇಳೆ ಭಾರತ ತಂಡದ ವೈದ್ಯಕೀಯ ಸಿಬ್ಬಂದಿ ಕೂಡ ಮೈದಾನ ತಲುಪಿ, ಇಬ್ಬರು ಆಟಗಾರರ ನೆರವಿಗೆ ನಿಂತರು. ಸ್ಟ್ರೆಚರ್‌ಗಳ ಮೂಲಕ ಈ ಇಬ್ಬರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!