ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಯಕಿ ಲತಾ ಮಂಗೇಶ್ಕರ್ ಅವರ ಕುಟುಂಬದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, ಲತಾ ಮಂಗೇಶ್ಕರ್ ಅವರು ಭಾರತದ ಕೋಗಿಲೆ. ಹಲವು ತಲೆಮಾರುಗಳ ಜನರ ಉಸಿರಿನ ಜೊತೆ ಲತಾ ಅವರು ಜೀವಂತವಾಗಿ ಇರುತ್ತಾರೆ. ದೇಶದ ಎಲ್ಲ ಜನತೆ ಮನಸ್ಸಲ್ಲೂ ಲತಾ ಅವರಿಗೆ ವಿಶೇಷ ಸ್ಥಾನ ಇದೆ ಎಂದಿದ್ದಾರೆ.
ಮಹಾನ್ ಗಾಯಕಿಯನ್ನು ನಾವು ಕಳೆದುಕೊಂಡಿದ್ದೇವೆ. ಲತಾ ಅವರ ನಿಧನದ ಗೌರವಾರ್ಥ ಕರ್ನಾಟಕದಲ್ಲಿ ಶೋಕಾಚರಣೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.