ಇಂದು ಸಿಎಂ ಸಿಟಿ ರೌಂಡ್ಸ್:‌ ಬೆಂಗಳೂರು ಪ್ರವಾಹ ಹಾನಿ ಸ್ಥಳಗಳಿಗೆ ಭೇಟಿ, ಪರಿಶೀಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಪ್ರವಾಹದಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಇಂದು ಮಧ್ಯಾಹ್ನ 3.15 ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಮನೆಯಿಂದ ನೇರವಾಗಿ ಮಾರತಹಳ್ಳಿ ಮುಖ್ಯರಸ್ತೆಯ ಬಳಿ ಇರುವ ಡಿಎನ್‍ಎ ಅಪಾರ್ಟ್‍ಮೆಂಟ್‍ ಬಳಿ ತೆರಳಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ವೀಕ್ಷಣೆ ಮಾಡುವರು.

ನಂತರ ವರ್ತೂರು ಬಳಿ ಇರುವ ಕೊಲಂಬಿಯಾ ಆಸ್ಪ್ರತೆ ಬಳಿಯ ಸುತ್ತಮುತ್ತಲಿನ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡುವರು. ಅಲ್ಲಿಂದ ಶಾಂತಿನಿಕೇತನ ಲೇಔಟ್ ಬಳಿ ಇರುವ ಆರ್.ಪಿ. ಲೇಔಟ್‌ಗೆ ಭೀಟಿ. ಇಕೋ ಸ್ಪೇಸ್ ಪ್ರದೇಶದ ಪ್ರವಾಹ ಪ್ರದೇಶ, ಕರಿಯಮ್ಮನ ಅಗ್ರಹಾರ ಲೇಔಟ್‍ನ ಹಿಂಭಾಗದ ಸಾಕ್ರ ಆಸ್ಪತ್ರೆಯ ಬಳಿ ಒಳಚರಂಡಿ ವೀಕ್ಷಣೆ, ನಂತರ ಎಸ್.ಬಿ.ಆರ್. ಪ್ಯಾಲೇಸ್ ಚೌಲ್ಟ್ರಿಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!