ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲ್ಲಿದ್ದಲು ಕಳ್ಳ ಸಾಗಾಣಿಕೆ ಹಗರಣದ ಕುರಿತಂತೆ ಪಶ್ಚಿಮ ಬಂಗಾಳದ 8 ಐಪಿಎಸ್ ಅಧಿಕಾರಿಗಳಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಇವರಿಗೆ ಆಗಸ್ಟ್ 21ರಿಂದ 31 ರೊಳಗೆ ದೆಹಲಿಯಲ್ಲಿ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಹಾಗೂ ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತವರ ಪತ್ನಿ ರುಜಿರಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬುಲಾವ್ ಬಂದಿದ್ದು ಈ ಪೈಕಿ ಇಬ್ಬರು ಎಡಿಜಿ, ಮತ್ತಿಬ್ಬರು ಡಿಐಜಿ ಹಾಗೂ ನಾಲ್ವರು ಎಸ್ಪಿ ಶ್ರೇಣಿಯ ಅಧಿಕಾರಿಗಳಿದ್ದಾರೆ ಸಮನ್ಸ್ ಜಾರಿ ಮಾಡಿದೆ.
ಹಗರಣದಲ್ಲಿ ಈ ಹಿರಿಯ ಅಧಿಕಾರಿಗಳು ಕೂಡ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾದ ಬಗ್ಗೆ ನಿರ್ದಿಷ್ಟವಾದ ಸುಳಿವುಗಳು ಇಡಿ ಅಧಿಕಾರಿಗಳಿಗೆ ಸಿಕ್ಕಿವೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಅಸನ್ಸೋಲ್ ಮತ್ತು ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಕಲ್ಲಿದ್ದಲು ಹಗರಣದಲ್ಲಿ ಇಡಿ ಹಾಗೂ ಸಿಬಿಐ ಸಮಾನಾಂತರವಾಗಿ ತನಿಖೆ ನಡೆಸುತ್ತಿವೆ.