ಬಿಸಿಲೆಯಲ್ಲಿ ಹೊಂಡಕ್ಕಿಳಿದು ವಾಹನ ಚಾಲಕರ ಬೆವರಿಳಿಸಿದ ಕಲ್ಲಿದ್ದಲು ಸಾಗಾಟ ಲಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯದ ಕುಲ್ಕುಂದ – ಬಿಸಿಲೆ ಘಾಟ್ ರಸ್ತೆಯ ಮಧ್ಯೆ ಬದಿಯ ಚರಂಡಿಗೆ ಕಲ್ಲಿದ್ದಲು ಹೇರಿಕೊಂಡು ಹೋಗುತಿದ್ದ ಲಾರಿ ಇಳಿದು ಬಾಕಿಯಾಗಿ ಬಿಸಿಲೆ ಘಾಟ್ ರಸ್ತೆಯಲ್ಲಿ ಸಂಚಾರಿಸುವ ವಾಹನಗಳಿಗೆ ಸಮಸ್ಯೆ ಉಂಟಾಗಿರುವ ಘಟನೆ ಸಂಭವಿಸಿದೆ.
ಶಿರಾಡಿ ಘಾಟ್ ರಾಷ್ಟೀಯ ಹೆದ್ದಾರಿ ಬಂದ್ ಆಗಿರುವುದರಿಂದ ಕರಾವಳಿ ಭಾಗಕ್ಕೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ವಾಹನಗಳು ಬಿಸಿಲೆ ಘಾಟ್ ರಸ್ತೆ ಮೂಲಕ ಬರುತ್ತಿದ್ದು. ಬಿಸಿಲೆ ಘಾಟ್ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಈ ಮದ್ಯೆ ಕಲ್ಲಿದ್ದಲು ಹೇರಿಕೊಂಡು ಹೋಗುವ ಲಾರಿಯೊಂದು ಚರಂಡಿಗೆ ಇಳಿದಿದ್ದು ಅಲ್ಲೆ ಸಿಲುಕಿಕೊಂಡಿತ್ತು. ಇದರಿಂದಾಗಿ ಇತರೆ ವಾಹನಗಳು ಸಂಚಾರಕ್ಕೆ ಅಡಚಣೆಯಾಗಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!