ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಳೆದ ವಾರದಿಂದ ವಿಪರೀತ ಚಳಿ ವಾತಾವರಣವಿದ್ದು, ಇಂದಿನಿಂದ ಉತ್ತರ ಕರ್ನಾಟಕ ಭಾಗಕ್ಕೂ ಶೀತದ ಅಲೆ ಅಪ್ಪಳಿಸಲಿದೆ. ಮಲೆನಾಡು ಭಾಗಗಳಲ್ಲಿ ಈಗಾಗಲೇ ವಿಪರೀತ ಚಳಿ ವಾತಾವರಣ ಎದುರಾಗಿದ್ದು, ಬೆಂಗಳೂರಿನಲ್ಲಿಯೂ ದಟ್ಟ ಮಂಜು ಕವಿದಿದೆ.
ಉತ್ತರ ಕರ್ನಾಟಕದಲ್ಲಿ ಚಳಿ ಅಲೆ ಇಂದಿನಿಂದ ಆರಂಭವಾಗಿದ್ದು, ಇದೇ ರೀತಿ ಐದಾರು ದಿನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆರೋಗ್ಯಕ್ಕೆ ಹಾನಿ?
ಈ ಚಳಿಗಾಳಿಯಿಂದ ಮೂಗು ಸೋರುವಿಕೆ, ಅಸ್ತಮಾ, ಜ್ವರ ಹಾಗೂ ಚರ್ಮದ ಸಮಸ್ಯೆ ತರುವ ಸಾರ್ಧಯತೆ ಇದೆ. ಗರ್ಭಿಣಿ ಹಾಗೂ ಮಕ್ಕಳು ಆದಷ್ಟು ಮನೆಯಲ್ಲಿ ಬೆಚ್ಚಗೆ ಇರುವುದು ಸೂಕ್ತ. ದೀರ್ಘಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ಹೆಚ್ಚು ಸಮಸ್ಯೆಯಾದೀತು. ಆದಷ್ಟು ಲೇಯರ್ಗಳಲ್ಲಿ ಬಟ್ಟೆ ಧರಿಸಿ,ಸಾಧ್ಯವಾದರೆ ಮನೆಯಲ್ಲಿ ಬೆಚ್ಚಗೆ ಉಳಿಯಬೇಕಿದೆ.