ಬೈಕಗಳೆರಡು ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸಾವು

ಹೊಸದಿಗಂತ ವರದಿ,ವಿಜಯಪುರ:

ಮುಖಾಮುಖಿ ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸಾವಿಗೀಡಾದ ಘಟನೆ ಸೊಲ್ಲಾಪುರ ರಸ್ತೆಯ ಕನ್ನಾಳ ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಡೋಮನಾಳ ಗ್ರಾಮದ ಸುರೇಶ ಹನುಮಂತ ತಳವಾರ (45), ವಿಜಯಪುರ ನಗರದ ಸತೀಶ ಪರಶುರಾಮ ಲೋಣಾರಿ (19) ಎಂದು ಗುರುತಿಸಲಾಗಿದೆ.

ವಿಜಯಪುರದಿಂದ ಸತೀಶ ಲೋಣಾರಿ ತಿಡಗುಂದಿಗೆ ತೆರಳುತ್ತಿದ್ದಾಗ, ಸುರೇಶ ತಳವಾರ ವಿಜಯಪುರಕ್ಕೆ ಬರುತ್ತಿದ್ದಾಗ ಈ ಅಪಘಾತ ನಡೆದಿದ್ದು, ಬೈಕ್ ಸವಾರರಿಬ್ಬರು ಸಾವಿಗೀಡಾದರೆ, ಹಿಂಬದಿಯ ಓರ್ವ ಸವಾರ ಗಾಯಗೊಂಡಿದ್ದಾನೆ.

ಗ್ರಾಮೀಣ ಪೊಲೀಸ್ ಠಾಣೆ ಪಿಎಸ್’ಐ ಜಿ.ಎಸ್. ಉಪ್ಪಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀಯತೆ ಮೆರೆದ ಶಾಸಕ ಚವ್ಹಾಣ: ಕನ್ನಾಳ ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ಅಪಘಾತಗೊಂಡು, ಬೈಕ್ ಸವಾರರು ಸ್ಥಳದಲ್ಲಿ ಬಿದ್ದಿರುವುದನ್ನು, ಮತಕ್ಷೇತ್ರ ಪ್ರವಾಸದಲ್ಲಿದ್ಧ ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಕಂಡು, ಅಪಘಾತಗೊಂಡವರನ್ನು ಆ್ಯಂಬುಲೇನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿ, ಮಾನವೀಯತೆ ಮೆರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!