ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಪುರಿ ಜಗನ್ನಾಥ ಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ನಿಯಮ ಮುಂದಿನ ಜನವರಿಯಿಂದ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಭಕ್ತರು ದೇವಸ್ಥಾನದ ಒಳಗೆ ಮೊಬೈಲ್ ತರಬಾರದು ಎಂಬ ನಿಯಮವಿತ್ತು. ಈಗ ಈ ನಿಬಂಧನೆಯು ಪೊಲೀಸ್ ಸಿಬ್ಬಂದಿಗೂ ಅನ್ವಯಿಸುತ್ತದೆ. ಈ ನಿರ್ಧಾರವು ಜನವರಿ 1/2023 ರಿಂದ ಜಾರಿಗೆ ಬರಲಿದೆ.
ಈ ನಿಯಮಗಳೊಂದಿಗೆ ಸೇವಕರು ಸಹ ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ದೇವಾಲಯದ ಹೊರಗೆ ತಮ್ಮ ಸ್ಮಾರ್ಟ್ಫೋನ್ಗಳನ್ನು ಇಡಬೇಕು. ಇದಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿಶೇಷ ವ್ಯವಸ್ಥೆ ಮಾಡುತ್ತಿದೆ. ಶ್ರೀ ಜಗನ್ನಾಥ ದೇವಾಲಯದ ಮುಖ್ಯ ಆಡಳಿತಾಧಿಕಾರಿ ವೀರ್ ವಿಕ್ರಮ್ ಯಾದವ್ ಮಾತನಾಡಿ, ದೇವಾಲಯದ ಅಧಿಕಾರಿಗಳು ಮತ್ತು ಸೇವಕರು ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವ ವೈಶಿಷ್ಟ್ಯಗಳನ್ನು ಹೊಂದಿರದ ಮೂಲ ಮಾದರಿಯ ಫೋನ್ಗಳನ್ನು(ಕಿಪ್ಯಾಡ್ ಸೆಟ್) ಕೊಂಡೊಯ್ಯಬಹುದು.