ಹುತಾತ್ಮ ಯೋಧನ ತಾಯಿ ಎದುರು ಯುಪಿ ಸಚಿವರ ಲಜ್ಜೆಗೇಡಿ ನಡೆಗೆ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಗನನ್ನು ಕಳೆದುಕೊಂಡು ರೋಧಿಸುತ್ತಿದ್ದ ತಾಯಿಗೆ ಸಾಂತ್ವನದ ಮಾತಿನ ಬದಲಾಗಿ ಚೆಕ್‌ ವಿತರಿಸಿ ಫೋಟೊಗಳಿಗೆ ಪೋಸ್‌ ಕೊಟ್ಟ ಉತ್ತರ ಪ್ರದೇಶ ಸಚಿವರ ವರ್ತನೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡ, ಉತ್ತರ ಪ್ರದೇಶದ ಆಗ್ರಾ ಮೂಲದ ಕ್ಯಾಪ್ಟನ್ ಶುಭಂ ಗುಪ್ತಾ ಅವರ ತಾಯಿಗೆ ಯುಪಿ ಸಚಿವ ಯೋಗೇಂದ್ರ ಉಪಾಧ್ಯಾಯ ಚೆಕ್‌ ವಿತರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಶುಭಂ ಗುಪ್ತಾ ಅವರ ತಾಯಿ ನನಗೆ ಏನೂ ಬೇಡ, ದಯವಿಟ್ಟು ಇದನ್ನು ಚಿತ್ರೀಕರಿಸಬೇಡಿ ಎಂದು ಮನವಿ ಮಾಡಿದರೂ..ಸಚಿವರು ಚೆಕ್‌ ಹಿಡಿದು ಫೋಟೋಗೆ ಪೋಸ್‌ ಕೊಟ್ಟಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಹುತಾತ್ಮ ಸೈನಿಕನ ತಾಯಿಯ ಗೋಳಾಟದಲ್ಲೂ ಪ್ರಚಾರ ಗಳಿಸುವ ಸಚಿವರ ಲಜ್ಜೆಗೇಡಿ ನಡಿಗೆ ಇದು. ಸಚಿವರು ಕೂಡಲೇ ಯೋಧನ ತಾಯಿಯ ಬಳಿ ಕ್ಷಮೆಯಾಚಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!