ಹೊಸದಿಗಂತ ವರದಿ, ಶಿವಮೊಗ್ಗ:
ಸಾಗರದ ಪ್ರಾದೇಶಿಕ ಸಾರಿಗೆ ಇಲಾಖೆ ಅಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿ ಕಳೆದ ಒಂದು ವರ್ಷದಿಂದ ತೆರಿಗೆ ಪಾವತಿ ಮಾಡದೆ ಓಡಾಡಿಸುತ್ತಿದ್ದ ಖಾಸಗಿ ಬಸ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಸುಮಾರು 4.50 ಲಕ್ಷ ರೂ. ತೆರಿಗೆ ಪಾವತಿ ಮಾಡದೆ ಇರುವುದು ಅಕಾರಿಗಳು ತಪಾಸಣೆ ವೇಳೆ ಪತ್ತೆಹಚ್ಚಿ ಬಸ್ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಗಾಯತ್ರಿ ದೇವಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಾದೇಶಿಕ ಸಾರಿಗೆ ಅಕಾರಿ ರಾಕೇಶ್, ಹಿರಿಯ ಮೋಟಾರ್ ವಾಹನ ನಿರೀಕ್ಷಕ ವಾಸುದೇವ್, ಹಿರಿಯ ಸಿಬ್ಬಂದಿ ಉಮೇಶ್ ಕೆ.ಬಿ., ಚಾಲಕ ಪಂಚಾಕ್ಷರಿ ಪಾಲ್ಗೊಂಡಿದ್ದರು.