ಕಾಂಗ್ರೆಸ್ ಜವಾಬ್ದಾರಿ ಇಲ್ಲದ ವಿರೋಧ ಪಕ್ಷ: ಸಂಸದ ತೇಜಸ್ವಿ ಸೂರ್ಯ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಜವಾಬ್ದಾರಿ ಇಲ್ಲದ ವಿರೋಧ ಪಕ್ಷ. ಯಾರಿಗೂ ಆಸಕ್ತಿ ಇಲ್ಲದ ವಿಚಾರದ ಮೇಲೆ ಜನರ ಹಣದಲ್ಲಿ ನಡೆಯುವ ಕಲಾಪದ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಸಂಸದ,ಈಶ್ವರಪ್ಪ ಹೇಳಿಕೆ ಕುರಿತು ನಮ್ಮ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳು ಕೂಡಾ ಹೇಳಿದ್ದಾರೆ. ಇನ್ನು ಸಚಿವ ಈಶ್ವರಪ್ಪ ಅವರು ಸ್ಪಷ್ಟನೆ ಕೂಡ ಕೊಟ್ಟಿದ್ದು, ಅದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ನಾನು ಮಾತಾಡುವಂಥದ್ದೇನೂ ಇಲ್ಲ ಎಂದರು.
ಇನ್ನು ಹಿಜಾಬ್-ಕೇಸರಿ ಶಾಲು ವಿಚಾರ ಕೋರ್ಟಿನಲ್ಲಿದೆ. ಅದರ ಬಗ್ಗೆ ಈ‌ ಹಂತದಲ್ಲಿ ನಾನು ಮಾತಾಡೋದು ಸರಿಯಲ್ಲ. ಕೋರ್ಟ್ ತೀರ್ಪು ಬಂದ ಬಳಿಕ‌ ಅದರ ಬಗ್ಗೆ ಮಾತಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!