ಕಾಂಗ್ರೆಸ್, ಜೆಡಿಎಸ್ ನವರಿಗೆ ಪೇಜ್ ಪ್ರಮುಖ್ ಅಂದ್ರೆನೇ ಗೊತ್ತಿಲ್ಲ: ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ ಬಳ್ಳಾರಿ:

ಜೆಡಿಎಸ್, ಕಾಂಗ್ರೆಸ್ ನವರಿಗೆ ‌ಪೇಜ್ ಪ್ರಮುಖ್ ರು ಅಂದ್ರೆನೇ ಗೊತ್ತಿಲ್ಲ, ಎರಡೂ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಲಿದ್ದೇವೆ ಎಂದು‌ ಹಗಲು ಕನಸು ಕಾಣುತ್ತಿವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯ ಪ್ರತಿ ಪೇಜ್ ಗೆ ಒಬ್ಬರಂತೆ ಪೇಜ್ ಪ್ರಮುಖ್ ರನ್ನು ಮಾಡಿದ್ದೇವೆ, ಪ್ರತಿ ಪೇಜ್ ನಲ್ಲಿ 6-7 ಕುಟುಂಬಗಳು ಬರಲಿದ್ದು, ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ತಲುಪಿವೆಯೋ ಇಲ್ವೋ, ಸಿಗದಿದ್ದರೇ ಅವರಿಗೆ ಕಲ್ಪಿಸುವುದು, ಅವರ ಏರಿಯಾಗಳಲ್ಲಿ ಶುದ್ದ ಕುಡಿವ ನೀರು ಬರುತ್ತಿವೆಯಾ, ಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದೇ ಪೇಜ್ ಅವರ ಕೆಲಸ, ಅವರಿಗೆ ಅದೇ 6-7ಕುಟುಂಬದವರ ಯೋಗಕ್ಷೇಮವನ್ನು ನೋಡಿಕೊಳ್ಳಲಿದ್ದಾರೆ, ಅವರಿಗೆ ಅದೇ ದೇಶ, ಅದೇ ರಾಜ್ಯವಾಗಿದೆ, ಪ್ರತಿ ಮತದಾರರೊಂದಿಗೆ ಅಣ್ಣ ತಮ್ಮಂದಿರಂತೆ ಇದ್ದಾರೆ.

ರಾಜ್ಯದ 224ಕ್ಷೇತ್ರಗಳಲ್ಲೂ ಬಿಜೆಪಿ ನಮ್ಮ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಜನರು ವಿಶ್ವಾಸವಿಟ್ಟಿದ್ದಾರೆ, ಬರುವ ಚುನಾವಣೆಯಲ್ಲಿ ಬಿಜೆಪಿ150+ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ದಾಖಲೆ ಸೃಷ್ಡಿಸಲಿದೆ ಎಂದರು.ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿರುಪಾಕ್ಷಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!