ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ಸಂಪನ್ನಗೊಂಡಿದೆ. ಆದರೆ ನಕಾರಾತ್ಮಕ ಚಿಂತನೆಯುಳ್ಳ ಕಾಂಗ್ರೆಸ್ ನಾಯಕರು ದ್ವೇಷದ ಹಾದಿಯನ್ನು ಬಿಡಲು ಸಿದ್ಧರಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನ ತರಭ್ ನಲ್ಲಿ ವಾಲಿನಾಥ್ ಮಹಾದೇವ ದೇವಸ್ಥಾನವನ್ನು ಉದ್ಘಾಟಿಸಿ, ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ , ಇಂದು ಇಡೀ ದೇಶವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿರುವುದಕ್ಕೆ ಸಂತೋಷ ಪಡುತ್ತಿದೆ. ಆದರೆ ನಕಾಕಾರತ್ಮಕವಾಗಿ ಜೀವಿಸುತ್ತಿರುವವರು ತಮ್ಮ ದ್ವೇಷದ ಹಾದಿಯನ್ನೇ ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ.
ದೇವರ ಕೆಲಸ ಮತ್ತು ದೇಶದ ಕೆಲಸ ಅತ್ಯಂತ ವೇಗವಾಗಿ ನಡೆಯುತ್ತಿರುವ ಸಮಯ ಇದಾಗಿದ್ದು, ಒಂದೆಡೆ ದೇಶದಲ್ಲಿ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ಬಡವರಿಗಾಗಿ ಲಕ್ಷಗಟ್ಟಲೆ ಮನೆಗಳೂ ನಿರ್ಮಾಣಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.