ದೇಶಕ್ಕೆ ಮಾಡಿದ ಅನ್ಯಾಯಕ್ಕಾಗಿ ಕಾಂಗ್ರೆಸ್ ಮೊದಲು ಕ್ಷಮೆ ಕೇಳಬೇಕು: ಸಿ.ಟಿ. ರವಿ

ಹೊಸದಿಗಂತ ಕಲಬುರಗಿ:
ಸಿಯಾಚಿನ್ ಭಾಗವನ್ನು ಚೀನಾ ದೇಶ ಆಕ್ರಮಣ ಮಾಡಿಕೊಂಡಾಗ ಆ ಜಾಗದಲ್ಲಿ ಒಂದು ಹುಲ್ಲ ಕಡ್ಡಿ ಸಹ ಬೆಳೆಯುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ಹೀಗಾಗಿ ದೇಶದಲ್ಲಿ ಯಾವಾಗ ಯಾವಾಗ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತೋ ಆವಾಗ ಆವಾಗ ಭಾರತ ದೇಶಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರ ಭಾರತ ನ್ಯಾಯ ಯಾತ್ರೆಗೆ ಕಿಡಿಕಾರಿದರು. ಹಿಂದೊಮ್ಮೆ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವದ ಅವಕಾಶ ಬಂದಿತ್ತು.ಆದರೆ, ಅದನ್ನು ಕಾಂಗ್ರೆಸ್ ಏಕೆ ನಿರಾಕರಿಸಿತು ಹೇಳಲಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಬಂದಾಗಲೆಲ್ಲಾ ದೇಶಕ್ಕೆ ಅನ್ಯಾಯವಾಗಿದೆ.ಹೀಗಾಗಿ ಭಾರತ ದೇಶಕ್ಕೆ ಮಾಡಿದ ಅನ್ಯಾಯಕ್ಕಾಗಿ ಕಾಂಗ್ರೆಸ್ ಮೊದಲು ಕ್ಷಮೇ ಕೇಳಬೇಕು ಎಂದ ಅವರು, ಕಾಂಗ್ರೆಸ್ ನವರಿಗೆ ಇದ್ದಿದ್ದು ಇದು ಪ್ರಾಯಶ್ಚಿತದ ಕಾಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!