ಬಿಜೆಪಿಗೆ ಕಪ್ಪು ಚುಕ್ಕೆ ತರಲು ಕಾಂಗ್ರೆಸ್ ಪ್ರಯತ್ನ: ಮಣಿಕಂಠ ರಾಠೋಡ್

ಹೊಸದಿಗಂತ ವರದಿ, ಕಲಬುರಗಿ:

ಕಾಂಗ್ರೆಸ್ ಪಕ್ಷದ ಕೆಲ ನಾಯಕರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ನನಗೆ ಹಾಗೂ ಬಿಜೆಪಿ ಪಕ್ಷಕ್ಕೆ ಕಪ್ಪು ಚುಕ್ಕೆ ತರುವ ನಿಟ್ಟಿನಲ್ಲಿ ನನ್ನ ಹೇಳಿಕೆಯನ್ನು ತಿರಿಚಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಡಿಯಲ್ಲಿ ಸೈನಿಕರು ಯಾವ ರೀತಿ ದೇಶದ ರಕ್ಷಣೆ ಮಾಡುತ್ತಿದ್ದಾರೆ ಅದರಂತೆ ನಾವು ಬಡವರ ಮತ್ತು ಸಮಾಜದ ರಕ್ಷಣೆಗೆ ಸೈನಿಕನಾಗಿ ನಿಂತಿದ್ದೇನೆ. ಅದಕ್ಕಾಗಿ ತಾವು ನನಗೆ ಎ ಕೆ 47 ಗನ್ ದಿಂದ ಶೂಟ್ ಮಾಡಿದರು ಸರಿ ತೋಪಿನಿಂದ ಶೂಟ್ ಮಾಡಿದರು ನಾನು ಸಾಯುವುದಕ್ಕೆ ಸಿದ್ದನಿದ್ದೇನೆ ಮತ್ತು ಶೂಟ್ ಮಾಡಕ್ಕೂ ತಯಾರಿದ್ದೇನೆ ಎಂದು ಹೇಳಿದ್ದೇನೆ. ಅದಕ್ಕೆ ಕಾಂಗ್ರೆಸ್ ಕೆಲವು ಮಾತು ತಿಳಿಯದ ನಾಯಕರು ಸರಕಾರದ ಮೇಲೆ ಗೂಬೆಕೂರಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಕ್ಷೇತ್ರದಲ್ಲಿ ಭೇಟಿ ಕೊಡದಿರುವುದರಿಂದ ಜನ ಧಿಕ್ಕರಿಸುತ್ತಿದ್ದಾರೆ. ಅದಕ್ಕೆ ಅವರಿಗೆ ಪೊಲೀಸ್ ರಕ್ಷಣೆ ಕೊಡಿಸಲು ಕಾಂಗ್ರೆಸ್ ನಾಯಕರು ಹೊಸ ಡಾಂಬರಾಟ ಪ್ರಾರಂಭಿಸಿದ್ದಾರೆ, ಅವರ ತಾಳಕ್ಕೆ ಕೆಲವರು ಕುಣಿಯುತ್ತಿದ್ದಾರೆ. ಕ್ಷೇತ್ರದ ಜನರು ಈ ಡೊಂಬರಾಟವನ್ನು ನಂಬದೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವರಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!