ಹಳೆ ಚಾಳಿ ಮುಂದುವರಿಸಿದ ಕಾಂಗ್ರೆಸ್ ಈ ಬಾರಿ ಮೂಲೆ ಗುಂಪಾಗೋದು ಗ್ಯಾರೆಂಟಿ : ಎನ್.ರವಿಕುಮಾರ್

ಹೊಸದಿಗಂತ ವರದಿ ಕಲಬುರಗಿ:

ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ತುಂಬಿದ ಸಪ೯ದ ಜೊತೆಗೆ ಹೋಲಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಹಳೆ ಚಾಡಿಯನ್ನು ಮುಂದುವರೆಸಿದ್ದು,ಖಂಡಿತವಾಗಿಯೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೂಲೆಗುಂಪು ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಶುಕ್ರವಾರ ಬೆಳಿಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸಪ೯ಕ್ಕೆ ಹೋಲಿಸಿದ್ದು,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿಯಾಗಿ ಚುನಾಯಿತರಾದ ಮೋದಿ ಅವರನ್ನು ಕಾಂಗ್ರೆಸ್ ಯಾವ ರೀತಿ ಕಾಣುತ್ತಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರಾದ ಖಗೆ೯ಯವರು ಹಿಂದೆಯೂ ಮೋದಿಯವರನ್ನು ರಾವಣ್ ಎಂದು ಸಂಭೋಧಿಸಿದ್ದರು. ಸೋನಿಯಾ ಗಾಂಧಿ ಕೂಡ ಮೌತ್ ಕಾ ಸೌದಾಗರ್ ಹಾಗೂ ರಾಹುಲ್ ಗಾಂಧಿ ಚೋರ್ ಎಂದು ಹೇಳುವ ಮೂಲಕ ದೇಶದ ಪ್ರಧಾನಿಯನ್ನು ನಿಂಧಿಸಿ,ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ದೇಶದ ಪ್ರಧಾನಿ ಅವರನ್ನು ವಿಷ ತುಂಬಿದ ಸಪ೯ಕ್ಕೆ ಹೋಲಿಕೆ ಮಾಡಿದ್ದು,ಈ ಎಲ್ಲಾ ವಿಷಯಗಳನ್ನು ಇಡೀ ರಾಜ್ಯದ ಜನರ ಮುಂದೆ ಇಂದಿನಿಂದಲೇ ತೆಗೆದುಕೊಂಡು ಹೋಗುತ್ತೇವೆ.ಯಾರು ವಿಷ ಸಪ೯ ಇದ್ದಾರೆ ಎಂಬುದನ್ನು ಈ ಚುನಾವಣೆಯಲ್ಲಿ ತಾವುಗಳು ತೀಮಾ೯ನ ಮಾಡಬೇಕೆಂದು ಮನವಿ ಮಾಡುತ್ತೇವೆ.ರಾಜ್ಯದಲ್ಲಿ 61 ಲಕ್ಷ ಮನೆಗಳನ್ನು ಬಡವರಿಗೆ ನೀಡಿ,ಅಪ್ಪರ ಭದ್ರಾ ಯೋಜನೆಗೆ 5300 ಕೋಟಿ ಕೊಟ್ಟು,ಕಳಸಾ ಬಂಡೂರಿ ವಿಷಯದಲ್ಲಿ ಐತಿಹಾಸಿಕ ನಿಣ೯ಯವನ್ನು ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಯ ಹೈವೇ ಯನ್ನು ಬಿಜೆಪಿ ಸಕಾ೯ರ ನಿಮಾ೯ಣ ಮಾಡುತ್ತಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಧಮ೯ವನ್ನು ಒಡೆಯುವುದಕ್ಕೆ ಕೈ ಹಾಕಿದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರೆನೂ ಸತ್ಯ ಹರಿಶ್ಚಂದ್ರರಾ ?ಎಂದು ಪ್ರಶ್ನಿಸಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನ ಮಾನ ಗೌರವದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ನಿಮಗೆ ಎಷ್ಟು ಶೋಭೆ ತರುತ್ತದೆ ಎಂದು ರವಿಕುಮಾರ್ ಪ್ರಶ್ನೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವೆಂಕಟಪ್ರಸಾದ್ ಮಾಲೇಪಾಟಿ,ನಾಗರಾಜ್ ಮಹಾಗಾಂವಕರ್, ಬಾಬುರಾವ್ ಹಾಗರಗುಂಡಗಿ, ಸಂತೋಷ್ ಹಾದಿಮನಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!