ಇಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ರಿಲೀಸ್‌, ಮತದಾರರಿಗೆ ಸಿಗುತ್ತಾ ಭರ್ಜರಿ ಗಿಫ್ಟ್ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಂಪರ್‌ ಭರವಸೆಗಳ ಅಸ್ತ್ರ ಜೋರಾಗಿದೆ. ನಿನ್ನೆ ಆಡಳಿತಾರೂಢ ಬಿಜೆಪಿ ತನ್ನ ಪ್ರಣಾಳಿಕೆಯನ್ನು ರಿಲೀಸ್‌ ಮಾಡಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಇದಕ್ಕೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ಗ್ಯಾರಂಟಿ ಅಸ್ತ್ರ ಜೊತೆಗೆ ಇಂದು ಇನ್ನಷ್ಟು ಭರವಸೆಗಳನ್ನು ಘೋಷಿಸಲು ಮುಂದಾಗಿದೆ.

ರಾಜ್ಯದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸಮಾವೇಶ, ರ್ಯಾಲಿಗಳ ಮೂಲಕ ಮತದಾರರಲ್ಲಿ ಮತಯಾಚಿಸಿದ ಪಕ್ಷಗಳು ಇದೀಗ ಪ್ರಣಾಳಿಕೆ ಮೂಲಕ ವೋಟ್‌ ಬ್ಯಾಂಕ್‌ ಭದ್ರಗೊಳಿಸೋ ತಂತ್ರ ಎಣೆದಿವೆ.

ಈವರೆಗೂ ಗ್ಯಾರಂಟಿ ಮೂಲಕ ಮತಗಳಿಗೆ ಗಾಳ ಹಾಕುತ್ತಿದ್ದ ಕಾಂಗ್ರೆಸ್‌ ಪಡೆ ಇಂದು ತನ್ನ ಪ್ರಣಾಳಿಕೆ ಪ್ರಕಟ ಮಾಡಲಿದೆ. 6 ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ಕಾಂಗ್ರೆಸ್‌, ಇಂದು ಉಳಿದ ಭರವಸೆಗಳನ್ನು ಘೋಷಿಸಲಿದೆ. ಇಂದು ಬೆಳಗ್ಗೆ 9 ಗಂಟೆಗೆ ಹೋಟೆಲ್‌ ಶಾಂಗ್ರಿಲಾದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಕೆಲ ಬಂಪರ್‌ ಗಿಫ್ಟ್‌ ಘೋಷಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!