ರಾಮಮಂದಿರ ನಿರ್ಮಾಣ ಮಾತ್ರ ನಮ್ಮ ಕನಸಲ್ಲ, ರಾಮ ರಾಜ್ಯ ನಿರ್ಮಾಣ ನಮ್ಮ ಕನಸು: ಪೇಜಾವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಮಂದಿರ ನಿರ್ಮಾಣ ಮಾತ್ರ ನಮ್ಮ ಕನಸಲ್ಲ. ರಾಮ ರಾಜ್ಯ ನಿರ್ಮಾಣ ನಮ್ಮ ಕನಸು. ಇದನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ದ್ರಾವಿಡ್‌ ಬ್ರಾಹ್ಮಣ ಸಮಾಜ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ರಾತ್ರಿ ಪೇಜಾವರ ಶ್ರೀಗಳಿಗೆ ನಡೆದ ಗುರು ವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಮರಾಜ್ಯ ನಿರ್ಮಾಣ ಸಾಧ್ಯವಾದರೆ ಎಲ್ಲಾ ಪ್ರಜೆಗಳೂ ರಾಮನಾಗಬೇಕು. ಮೇಲಾಗಿ ರಾಮನಂತಹ ಮಹಾನ್ ನಾಯಕನನ್ನು ಆಯ್ಕೆ ಮಾಡಬೇಕು.

ಈಗ ನಾನು ರಾಮನ ಭೂಮಿ ಅಯೋಧ್ಯೆಯಿಂದ ಹನುಮಂತನ ಭೂಮಿಗೆ ಬಂದಿದ್ದೇನೆ. ಅನೇಕ ಸಂತರು ಮತ್ತು ಜನರು ರಾಮಮಂದಿರಕ್ಕಾಗಿ ಶ್ರಮಿಸಿದ್ದಾರೆ, ಅವರೆಲ್ಲರ ಪರವಾಗಿ ನಾನು ಈ ಗುರುವಂದನೆಯನ್ನು ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು.

ಹಿಂದೂ ಸಮುದಾಯ ಎಲ್ಲಿಯವರೆಗೆ ಬಹುಸಂಖ್ಯಾತರಾಗಿರುವುದೋ ಅಲ್ಲಿಯವರೆಗೆ ರಾಮಮಂದಿರ ಮಂದಿರವಾಗಿಯೇ ಇರುತ್ತದೆ. ನಮ್ಮ ಸಂಸ್ಕೃತಿ ಮತ್ತೆ ಪರಕೀಯರ ಕೈಯಲ್ಲಿ ಸಿಗಬಾರದು ಎಂದರೆ, ನಮ್ಮ ಮಕ್ಕಳಿಗೆ ಇಂದಿನಿಂದಲೇ ನಮ್ಮ ಸಂಸ್ಕೃತಿಯನ್ನು ಕಲಿಸಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!