Thursday, March 30, 2023

Latest Posts

ಸರ್ಕಾರಿ ಭೂಮಿಯಲ್ಲಿ ಮಗನ ಸ್ಮಾರಕ ನಿರ್ಮಾಣ : ಹುತಾತ್ಮ ಯೋಧನ ತಂದೆಗೆ ಥಳಿಸಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮೃತ ಯೋಧನ ಸ್ಮಾರಕವನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದಕ್ಕಾಗಿ, ಯೋಧನ ತಂದೆಯನ್ನು ಥಳಿಸಿ ಬಂಧಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಪೂರ್ವ ಲಡಾಖ್‌ನಲ್ಲಿ ಚೀನಾದ ಪಿಎಲ್‌ಎ ಪಡೆಗಳೊಂದಿಗೆ 2020ರ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡ ಮೃತ ಸೇನಾ ಜವಾನ್ ಜೈ ಕಿಶೋರ್ ಸಿಂಗ್ ಅವರ ಕುಟುಂಬ ಸದಸ್ಯರು, ಬಿಹಾರದ ವೈಶಾಲಿಯಲ್ಲಿರುವ ಜಂದಾಹಾದಲ್ಲಿ ಸರ್ಕಾರಿ ಭೂಮಿಯಲ್ಲಿ ತನ್ನ ಮಗನಿಗೆ ಸ್ಮಾರಕವನ್ನು ನಿರ್ಮಿಸಿದ್ದಕ್ಕಾಗಿ ಸಿಂಗ್ ಅವರ ತಂದೆಯನ್ನು ಥಳಿಸಿ ನಂತರ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿಸಲಾಗಿದೆ.

ಆದರೆ ಈ ಘಟನೆಗೆ ಸಂಬಂಧಿಸಿದಂತೆ, ಭೂಮಾಲೀಕರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅಕ್ರಮ ಒತ್ತುವರಿ ವಿಚಾರಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!