ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಂತ್ನಾಗ್ನಲ್ಲಿ ಎನ್ಕೌಂಟರ್ ಮುಂದುವರಿದಿದ್ದು, ಮತ್ತೋರ್ವ ಉಗ್ರನನ್ನು ಭಾರತೀಯ ಸೇನೆ ಸದೆಬಡೆದಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ, ಹತ್ಲಂಗಾದ ಮುಂಚೂಣಿ ಪ್ರದೇಶದಲ್ಲಿ ಭಯೋತ್ಪಾದಕರು, ಸೇನೆ ನಡುವೆ ಕಳೆದ ಮೂರು ದಿನಗಳಿಂದ ಎನ್ಕೌಂಟರ್ ನಡೆಯುತ್ತಿದೆ.
ಬಾರಾಮುಲ್ಲಾ ಪೊಲೀಸರು ಸೇನೆಗೆ ಸಾಥ್ ನೀಡಿದ್ದು, ಇಂದು ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ. ಭಯೋತ್ಪಾದಕರ ಪತ್ತೆಗೆ ಡ್ರೋನ್ ಬಳಕೆ ಮಾಡಲಾಗುತ್ತಿದ್ದು, ಅವಿತಿರುವ ಉಗ್ರರನ್ನು ಸದೆಬಡೆಯುವಲ್ಲಿ ಸೇನೆ ನಿರತವಾಗಿದೆ. ಉಗ್ರರ ದಾಳಿಗೆ ಈಗಾಗಲೇ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.