ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದೇವರಕೊಂಡ ಮತ್ತು ಸಮಂತಾ ಅಭಿನಯದ ಖುಶಿ ಚಿತ್ರದ ಯಶಸ್ವಿನಿಂದಾಗಿ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಹಣ ನೀಡುವುದಾಗಿ ನಟ ವಿಜಯ್ ದೇವರಕೊಂಡ ಹಿಂದೆ ವೈಜಾಗ್ನಲ್ಲಿ ಹೇಳಿದ್ದರು. ಅದರಂತೆ ನೂರು ಕುಟುಂಬಗಳನ್ನು ಆಯ್ಕೆ ಮಾಡಿ ಪ್ರತಿ ಕುಟುಂಬಕ್ಕೂ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.
ನಿನ್ನೆ ನಡೆದ ಸಮಾರಂಭದಲ್ಲಿ ಚೆಕ್ ಸ್ವೀಕರಿಸಿದ ಕುಟುಂಬಗಳು ಸಂಭ್ರಮದಿಂದ ವಿಜಯ್ ಅವರನ್ನು ಅಪ್ಪಿಕೊಂಡು, ಧನ್ಯವಾದ ತಿಳಿಸಿದರು. ಹೈದರಾಬಾದ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಯಕ ವಿಜಯ್ ದೇವರಕೊಂಡ, ನಿರ್ದೇಶಕ ಶಿವ ನಿರ್ವಾಣ, ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ಮಿಥ್ ಮೂವಿ ಮೇಕರ್ಸ್ ವೈ ರವಿಶಂಕರ್ ಭಾಗವಹಿಸಿದ್ದರು.
ಬಳಿಕ ವಿಜಯ್ ದೇವರಕೊಂಡ ಮಾತನಾಡಿ.. ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರುತ್ತಿರುವ ನಿಮಗಾಗಿ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಬೇಕು. ನನಗೂ ಹಿಂದೊಮ್ಮೆ ಹೀಗೆ ಯಾರಾದರೂ ಸಹಾಯ ಮಾಡಿದರೆ ಚೆನ್ನ ಎಂದು ಅನಿಸಿತು. ಓದುವ ದಿನಗಳಲ್ಲಿ ಗೆಳೆಯರೆಲ್ಲ ಜಾಲಿ ಟ್ರಿಪ್ ಹೋದರೆ ದುಡ್ಡಿಲ್ಲದೆ, ಅಪ್ಪ-ಅಮ್ಮನನ್ನು ಕೇಳಲಾಗದೆ ಹಾಗಯೇ ಇದ್ದುದುಂಟು. ನನ್ನ ತಮ್ಮನ ಇಂಜಿನಿಯರಿಂಗ್ ಫೀಸ್ ಕಟ್ಟಲು ಪರದಾಡುತ್ತಿರುವಾಗ ಇಂತಹ ಅಗತ್ಯದಲ್ಲಿ ಯಾರಾದರೂ ಸ್ವಲ್ಪ ಹಣ ಕೊಟ್ಟರೆ ಚೆನ್ನ ಅನಿಸಿದ್ದಂತೂ ಸುಳ್ಳಲ್ಲ ಎಂದು ಭಾವುಕರಾದರು.
ಎಲ್ಲಿವರೆಗೆ ನನ್ನ ಬಳಿ ಹಣ ಇರುತ್ತದೆಯೋ ಅಲ್ಲಿವರೆಗೆ ಇಂತಹ ಕೆಲಸಗಳನ್ನು ನಾನು ಮಾಡುತ್ತೇನೆ. ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು ಎಂದು ವಿಜಯ್ ಹೇಳಿದರು.