ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡದು ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪ ತಾಲ್ಲೂಕು ಹರಿಹರಪುರದ ನಾಗಲಾಪುರ ಸೇತುವೆ ಬಳಿ ಸೋಮವಾರ ರಾತ್ರಿ 12 ಗಂಟೆ ಸಮಯದಲ್ಲಿ ನಡೆದಿದೆ. ನಡೆದಿದೆ.
ಕೊಪ್ಪ ಪಟ್ಟಣದ ಗುಣವಂತೆ ಮೆಡಿಕಲ್ ಮಾಲೀಕ ರಾಜಶೇಖರ್(51) ಹಾಗೂ ಆಲ್ದೂರು ನಿವಾಸಿ ಮಣಿಕಂಠ(37) ಎಂಬುವವರು ಮೃತ ದುರ್ದೈವಿಗಳಾಗಿದ್ದಾರೆ. ಕೊಪ್ಪದ ನಂದಿನಿ ರೆಸ್ಟೋರೆಂಟ್ ಮಾಲೀಕ ಸುರೇಶ್ ಹಾಗೂ ಕಾರು ಚಾಲಕ ವಿನಯ್ ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕೂ ಮಂದಿ ಕಾರಿನಲ್ಲಿ ಆಗುಂಬೆಯಿಂದ ಕೊಪ್ಪಕ್ಕೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಹರಿಹರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.