ಮಹಿಳಾ ಏಷ್ಯಾ ಕಪ್ ನಲ್ಲಿ ವಿವಾದ: ಬ್ಯಾಟ್​ ಕ್ರೀಸ್​ ದಾಟಿದ್ದರೂ ಔಟ್​ ನೀಡಿದ ಮೂರನೇ ಅಂಪೈರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳಾ ಏಷ್ಯಾ ಕಪ್ ನಲ್ಲಿ ಕ್ರಿಕೆಟ್​ನಲ್ಲಿ ಭಾರತದ ಪೂಜಾ ವಸ್ತ್ರಕಾರ್​ ಅವರ ರನ್​ ಔಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವರಾಜ್​ ಸಿಂಗ್​ ಸೇರಿದಂತೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶಾಕ್​ ವ್ಯಕ್ತಪಡಿಸಿದ್ದಾರೆ.

ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 41 ರನ್​ಗಳ ಗೆಲುವು ಸಾಧಿಸಿದೆ. ಆದರೆ, ಪಂದ್ಯದ ವೇಳೆ ಮೂರನೇ ಅಂಪೈರ್​ ತಪ್ಪು ನಿರ್ಧಾರದಿಂದ ಭಾರತದ ಪೂಜಾ ವಸ್ತ್ರಕಾರ್​ ಮೈದಾನದಿಂದ ಹೊರನಡೆಯಬೇಕಾಯಿತು.

ಪಂದ್ಯದಲ್ಲಿ ಪೂಜಾ ವಸ್ತ್ರಕಾರ್​ ಒಂಟಿ ರನ್​ಗಾಗಿ ಓಡುತ್ತಿದ್ದಾಗ ಶ್ರೀಲಂಕಾ ವಿಕೆಟ್​ ಕೀಪರ್​ ರನೌಟ್​ಗೆ ಯತ್ನಿಸಿದರು. ಪೂಜಾ ಬ್ಯಾಟ್​ ಕ್ರೀಸ್​ ಅಂಚಿನಲ್ಲಿ ದಾಟುತ್ತಿದ್ದಾಗ ಬೇಲ್​​ ಎಗರಿವೆ. ತೀರ್ಪು ನಿರ್ಣಯಿಸಲು ಮೂರನೇ ಅಂಪೈರ್​ ಪರಿಶೀಲಿಸಿದಾಗ ಬ್ಯಾಟ್​ ಕ್ರೀಸ್​ನಲ್ಲಿರುವುದು ಗೋಚರವಾಯಿತು.

ಈ ವೇಳೆ ಎಲ್ಲ ಆಟಗಾರರು ನಾಟೌಟ್​ ಎಂದು ತಿಳಿದು ಫೀಲ್ಡಿಂಗ್​ಗೆ ಸಜ್ಜಾಗಿದ್ದರೆ, ಮೂರನೇ ಅಂಪೈರ್​ ಔಟ್​ ಎಂದು ಘೋಷಿಸಿದರು. ಇದು ಕೆಲ ವೇಳೆ ಗಲಿಬಿಲಿ ಉಂಟು ಮಾಡಿತು. ಬಳಿಕ ಪೂಜಾ ವಸ್ತ್ರಕಾರ್​ ಅವರನ್ನು ಫೀಲ್ಡ್​ ಅಂಪೈರ್​ ಮೈದಾನ ತೊರೆಯಲು ಸೂಚಿಸಿದರು.

ಈ ಬಗ್ಗೆ ಟ್ವೀಟ್​ ಮಾಡಿರುವ ಭಾರತ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​, “ಇದೊಂದು ಕೆಟ್ಟ ತೀರ್ಪಾಗಿದೆ” ಎಂದು ಟೀಕಿಸಿದ್ದರೆ, ಟ್ವಿಟ್ಟರ್​ ಬಳಕೆದಾರರೊಬ್ಬರು “ಎಲ್ಲರೂ ನಾಟೌಟ್​ ಎಂದು ಭಾವಿಸಿ ಫೀಲ್ಡಿಂಗ್​ಗೆ ಸಜ್ಜಾಗಿದ್ದರೆ, ಔಟ್​ ಹೇಗಾಯಿತು” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!