ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಏಷ್ಯಾ ಕಪ್ ನಲ್ಲಿ ಕ್ರಿಕೆಟ್ನಲ್ಲಿ ಭಾರತದ ಪೂಜಾ ವಸ್ತ್ರಕಾರ್ ಅವರ ರನ್ ಔಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವರಾಜ್ ಸಿಂಗ್ ಸೇರಿದಂತೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶಾಕ್ ವ್ಯಕ್ತಪಡಿಸಿದ್ದಾರೆ.
ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 41 ರನ್ಗಳ ಗೆಲುವು ಸಾಧಿಸಿದೆ. ಆದರೆ, ಪಂದ್ಯದ ವೇಳೆ ಮೂರನೇ ಅಂಪೈರ್ ತಪ್ಪು ನಿರ್ಧಾರದಿಂದ ಭಾರತದ ಪೂಜಾ ವಸ್ತ್ರಕಾರ್ ಮೈದಾನದಿಂದ ಹೊರನಡೆಯಬೇಕಾಯಿತು.
— cricket fan (@cricketfanvideo) October 1, 2022
ಪಂದ್ಯದಲ್ಲಿ ಪೂಜಾ ವಸ್ತ್ರಕಾರ್ ಒಂಟಿ ರನ್ಗಾಗಿ ಓಡುತ್ತಿದ್ದಾಗ ಶ್ರೀಲಂಕಾ ವಿಕೆಟ್ ಕೀಪರ್ ರನೌಟ್ಗೆ ಯತ್ನಿಸಿದರು. ಪೂಜಾ ಬ್ಯಾಟ್ ಕ್ರೀಸ್ ಅಂಚಿನಲ್ಲಿ ದಾಟುತ್ತಿದ್ದಾಗ ಬೇಲ್ ಎಗರಿವೆ. ತೀರ್ಪು ನಿರ್ಣಯಿಸಲು ಮೂರನೇ ಅಂಪೈರ್ ಪರಿಶೀಲಿಸಿದಾಗ ಬ್ಯಾಟ್ ಕ್ರೀಸ್ನಲ್ಲಿರುವುದು ಗೋಚರವಾಯಿತು.
ಈ ವೇಳೆ ಎಲ್ಲ ಆಟಗಾರರು ನಾಟೌಟ್ ಎಂದು ತಿಳಿದು ಫೀಲ್ಡಿಂಗ್ಗೆ ಸಜ್ಜಾಗಿದ್ದರೆ, ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಇದು ಕೆಲ ವೇಳೆ ಗಲಿಬಿಲಿ ಉಂಟು ಮಾಡಿತು. ಬಳಿಕ ಪೂಜಾ ವಸ್ತ್ರಕಾರ್ ಅವರನ್ನು ಫೀಲ್ಡ್ ಅಂಪೈರ್ ಮೈದಾನ ತೊರೆಯಲು ಸೂಚಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಭಾರತ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, “ಇದೊಂದು ಕೆಟ್ಟ ತೀರ್ಪಾಗಿದೆ” ಎಂದು ಟೀಕಿಸಿದ್ದರೆ, ಟ್ವಿಟ್ಟರ್ ಬಳಕೆದಾರರೊಬ್ಬರು “ಎಲ್ಲರೂ ನಾಟೌಟ್ ಎಂದು ಭಾವಿಸಿ ಫೀಲ್ಡಿಂಗ್ಗೆ ಸಜ್ಜಾಗಿದ್ದರೆ, ಔಟ್ ಹೇಗಾಯಿತು” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.