ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಲ್ಲಿ ಸಂಭವಿಸಿದ ‘ಕುಕ್ಕರ್ ಬಾಂಬ್’ ಸ್ಫೋಟದ ಆರೋಪಿ ಮುಹಮ್ಮದ್ ಶಾರಿಕ್ ಬಗ್ಗೆ ಮಾಹಿತಿ ಕಲೆಹಾಕಲು ಕರ್ನಾಟಕದ ಪೊಲೀಸರೀಗ ತಮಿಳುನಾಡು ಮತ್ತು ಕೇರಳದ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದ್ದಾರೆ.
ಶಾರಿಕ್ ಮೈಸೂರಿನ ಮೊಬೈಲ್ ಅಂಗಡಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಒಂದು ಬಾರಿ ತನ್ನ ವಾಟ್ಸ್ಯಾಪ್ ಸ್ಟೇಟಸ್ನಲ್ಲಿ ಕೇರಳ ನೋಂದಣಿಯ ಬೈಕ್ ಫೋಟೋ ಹಾಕಿದ್ದ. ಹಲವು ಬಾರಿ ಕರೆ ಬಂದಾಗ ತಮಿಳಿನಲ್ಲಿ ಮಾತನಾಡುತ್ತಿದ್ದ. ಸ್ವಲ್ಪ ಸಮಯ ಶಾರಿಕ್ ತಮಿಳುನಾಡಿನಲ್ಲಿದ್ದೆ ಎಂದು ಅಂಗಡಿ ಮಾಲಿಕನಿಗೆ ಹೇಳಿದ್ದ. ಇದನ್ನು ತನಿಖೆಯ ಸಂದರ್ಭ ಮೊಬೈಲ್ ಅಂಗಡಿಯ ಮಾಲಿಕರು ಮಾಹಿತಿ ನೀಡಿದ್ದು, ವಿವಿಧ ಆಯಾಮಗಳಲ್ಲಿ ಈ ಬಗ್ಗೆ ತನಿಖೆ ಚುರುಕುಗೊಳಿಸಲಾಗುತ್ತಿದೆ.