ದಕ್ಷಿಣ ಕನ್ನಡ ಜಿಲ್ಲೆಗೆ ಸತತ ಎರಡನೇ ದಿನವೂ ಖುಷಿ ಸುದ್ದಿಕೊಟ್ಟ ಕೊರೋನಾ!

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ (ಮಾ.25) ಯಾರಿಗೂ ಕೊರೋನಾ ಸೋಂಕು ದೃಢ ಪಟ್ಟಿಲ್ಲ ಎಂಬ ಒಳ್ಳೆಯ ಸುದ್ದಿಯನ್ನು ಆರೋಗ್ಯ ಇಲಾಖೆ ನೀಡಿದೆ. ಶನಿವಾರವೂ ಸೋಂಕು ನಿಲ್ ಆಗಿತ್ತು. ಎರಡು ವರ್ಷಗಳ ದೀರ್ಘ ಅವಧಿಯ ಬಳಿಕ ಸೋಂಕಿತರಿಲ್ಲದ ದಿನಗಳು ವರದಿಯಾಗಿದೆ.
ಇತ್ತೀಚಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ಅದು ಹಲವು ದಿನಗಳಿಂದ ಒಂದಂಕೆಯಲ್ಲಿ ಮುಂದುವರಿದಿತ್ತು. ಶನಿವಾರ ಒಬ್ಬರು ಸೋಂಕು ಮುಕ್ತರಾಗಿದ್ದಾರೆ. ಈ ತನಕ ಜಿಲ್ಲೆಯಲ್ಲಿ ಒಟ್ಟು 1,33,621 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಶನಿವಾರ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,850 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಡಿಎಚ್ಒ ಕಚೇರಿ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡದಲ್ಲಿ ಸಕ್ರಿಯ ಪ್ರಕರಣಗಳು ಎರಡಂಕೆಗಳಿಂದ ಒಂದಂಕೆಗೆ ಇಳಿಕೆಯಾಗಿದೆ. ಶನಿವಾರ 9 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಸೋಂಕಿತ ಪ್ರಕರಣಗಳು ಇಲ್ಲದ ಕಾರಣ ಪಾಸಿಟಿವಿಟಿ ಶೂನ್ಯವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!