ದಿಗಂತ ವರದಿ ಉಡುಪಿ:
ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದಾದ್ಯಂತ ಖಾಕಿ ಕಣ್ಗಾವಲಿಟ್ಟಿದೆ.
ಸೋಮವಾರ ಮಧ್ಯಾಹ್ನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಹಾಗು ಉಡುಪಿ ನಗರ ಡಿವೈಎಸ್ಪಿ ಸುಧಾಕರ್ ನಾಯ್ಕ್ ರಥಬೀದಿಯಲ್ಲಿ ಭದ್ರತೆಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಪರ್ಯಾಯ ಮಹೋತ್ಸವಕ್ಕೆ ಪೋಲಿಸ್ ಇಲಾಖೆ ಸನ್ನಧವಾಗಿದ್ದು, ರಥಬೀದಿ, ರಾಜಾಂಗಣ, ಕೃಷ್ಣ ಮಠ ಪರಿಸರದಲ್ಲಿ 32 ಹಾಗು ಮೆರವಣಿಗೆ ಬರುವ ದಾರಿಯಲ್ಲಿ 31 ಸಿಸಿಟಿವಿ ಯನ್ನು ಅಳವಡಿಸಲಾಗಿದೆ. ರಥಬೀದಿಯಲ್ಲಿ ಪೋಲಿಸ್ ಹೊರ ಠಾಣೆಯನ್ನು ಸ್ಥಾಪಿಸಿದ್ದೇವೆ ಎಂದರು.