ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪ್ರಸಿದ್ಧ ‘ತ್ರಿಶೂರ್ ಪೂರಂ’ (ತ್ರಿಶೂರ್ ಉತ್ಸವ)ಗೆ ಕ್ಷಣಗಣನೆ ಆರಂಭವಾಗಿದ್ದು, ಪೂರ್ವಭಾವಿ ಸಿಡಿಮದ್ದು ಪ್ರದರ್ಶನ ಆರಂಭವಾಗಿದೆ.
ಇದಕ್ಕೂ ಮುನ್ನ ದೇವಸ್ವಂ ಅಗ್ರಶಾಲೆಯಲ್ಲಿ ಪರಮೆಕ್ಕಾವ್ ಅವರಿಂದ ಕೌಸ್ತುಭಮ್ ಸಭಾಂಗಣದಲ್ಲಿ ಅಲಂಕಾರ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ, ಸಚಿವರಾದ ಕೆ. ರಾಜನ್, ಆರ್. ಬಿಂದು, ಮತ್ತು ಮೇಯರ್ ಎಂ.ಕೆ. ವರ್ಗೀಸ್ ಪಾಲ್ಗೊಂಡಿದ್ದರು.
ಮೇ 6 ರಂದು ತ್ರಿಶೂರ್ ಪೂರಂ ನಡೆಯಲಿದ್ದು, ನಗರಕ್ಕೆ ನಗರವೇ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ. ಈ ಬಾರಿ ಬರೋಬ್ಬರಿ 18 ಲಕ್ಷ ಜನರು ಪೂರಂಗೆ ಆಗಮಿಸುವ ನಿರೀಕ್ಷೆಯಿದೆ. ಎಲ್ಲೆಡೆ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.