ದಿಗಂತ ವರದಿ ವಿಜಯಪುರ:
ವಿಧಾನಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆ ನಗರದ ಸೈನಿಕ ಶಾಲೆಯಲ್ಲಿನ ಸ್ಟ್ರಾಂಗ್ ರೂಮ್ ಅನ್ನು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 7.30 ಕ್ಕೆ ಓಪನ್ ಮಾಡಲಾಗಿದ್ದು, ಮತ ಎಣಿಕೆ ಕಾರ್ಯ ಆರಂಭಗೊಂಡಿದೆ.
ಈ ಸಂದರ್ಭ ಅಭ್ಯರ್ಥಿಗಳ ಏಜೆಂಟ್ ರು, ಎಸ್’ಪಿ ಎಚ್.ಡಿ. ಆನಂದಕುಮಾರ, ಸ್ವೀಪ್ ಅಧಿಕಾರಿ ರಾಹುಲ್ ಶಿಂಧೆ, ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ ಇದ್ದರು.