ಪ್ರಧಾನಿ ಮೋದಿಯಂತಹ ನಾಯಕ ಸಿಕ್ಕಿರುವುದು ದೇಶದ ಸೌಭಾಗ್ಯ: ಸಂಸದೆ ಸುಮಲತಾ

ಹೊಸದಿಗಂತ ವರದಿ, ಮಂಡ್ಯ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂತಹ ನಾಯಕ ಸಿಕ್ಕಿರುವುದು ದೇಶದ ಸೌಭಾಗ್ಯ, ಬಿಜೆಪಿ ಪಕ್ಷದಿಂದ ನಾನು ಸಂಸದೆ ಆದರೆ ಅವರ ಕೈ ಬಲಪಿಡಿಸಿದಂತಾಗುತ್ತದೆ, ಟಿಕೆಟ್ ಸಿಗುತ್ತದೆ ಎಂಬುವ ವಿಶ್ವಾಸ ನನಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಅಗತ್ಯವಿದ್ದಾಗಲೆಲ್ಲಾ ನಾನು ಮಂಡ್ಯಕ್ಕೆ ಬಂದಿರುವುದು ನಿಜ, ಪಾರ್ಲಿಮೆಂಟ್ ಇದ್ದಾಗ ಮಂಡ್ಯಕ್ಕೆ ಬಂದಿಲ್ಲ. ಲೋಕಸಭಾ ಅವಧಿ ಮುಗೀತ ಬರುತ್ತಿದೆ. ಈಗ ಎಂಪಿ ಫಂಡ್ಸ್ ಬಳಸಿ ಕೆಲಸ ಆರಂಭಿಸಲಿಲ್ಲ ಎಂದರೆ ನೀತಿ ಸಂಹಿತೆ ಬರಲಿದೆ. ಆ ಕಾರಣಕ್ಕಾಗಿ ಹೆಚ್ಚು ಮಂಡ್ಯಕ್ಕೆ ಭೇಟಿ ಮಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಘೋಷಣೆಯಾಗಿಲ್ಲ

ಮೈತ್ರಿ ಟಿಕೆಟ್ ವಿಚಾರದಲ್ಲಿ ಬಿಜೆಪಿ ಪಕ್ಷವು ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ಎಂಬುದು ಅದು ನನ್ನ ವೈಯಕ್ತಿಕ ವಿಚಾರ? ಆದರೆ ಪಕ್ಷದಿಂದ ಬರುವುದೆ ಅಧಿಕೃತ ಘೋಷಣೆಯಾಗಲಿದೆ. ಸಂಸದೆಯಾಗಿ ಸುಮಲತಾ ಕಾರ್ಯವೈಖರಿ ನೋಡಿ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ವಿಶ್ವಾಸವೂ ಇದೆ ಎಂದರು.

ಕಳೆದ ಎಂಪಿಗಳು ಹಾಗೂ ನನ್ನ ಕೆಲಸಕ್ಕೂ ವ್ಯತ್ಯಾಸವಿದೆ, ನರೇಂದ್ರ ಮೋದಿ ಅವರ ವಿಷನ್, ಅವರು ಕೆಲಸ ಮಾಡುವ ರೀತಿ, ಅವರ ಅಭಿವೃದ್ಧಿ ಮಂತ್ರ, ಪ್ರಧಾನ ಸೇವಕ ಎಂದು ಮೋದಿ ಅವರೆ ಹೇಳಿಕೊಳ್ಳುತ್ತಾರೆ, ಬಿಜೆಪಿ ಪಕ್ಷದಿಂದ ಎಂಪಿ ಆದರೆ ಮೋದಿ ಅವರ ಕೈ ಬಲಪಡಿಸಿದ ಹಾಗೇ ಆಗುತ್ತದೆ. ಮೋದಿ ಅವರಂತ ನಾಯಕ್ ಸಿಕ್ಕಿರುವುದು ನಮ್ಮ ದೇಶದ ಸೌಭಾಗ್ಯ ಎಂದು ಸ್ಮರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!