ಹೊಸದಿಗಂತ ವರದಿ,ಕಲಬುರಗಿ:
ಚಿರತೆಯ ದಾಳಿಗೆ ಅಮಾಯಕ ಹಸುವೊಂದು ಬಲಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಮಾನಾಯಕ ತಾಂಡದಲ್ಲಿ ನಡೆದಿದೆ.
ರಾಮಾನಾಯಕ ತಾಂಡಾದ ನಿವಾಸಿ, ರಮೇಶ್ ಜಾಧವ ಅವರಿಗೆ ಸೇರಿದ ಹಸುವಾಗಿದ್ದು,ಹೊಲದಲ್ಲಿ ಹಸುವನ್ನು ಮೇಯಲು ಬಿಟ್ಟಾಗ ಈ ಘಟನೆ ಜರುಗಿದೆ.
ಗುಡ್ಡಗಾಡು ಪ್ರದೇಶದಲ್ಲಿರುವ ರಾಮಾನಾಯಕ ತಾಂಡಾವಾಗಿದ್ದು,ಚಿರತೆ ದಾಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪೋಲಿಸರು ಭೇಟಿ ನೀಡಿ,ಪರಿಶೀಲನೆ ನಡೆಸಿದ್ದಾರೆ.