CRICKET | ಟೆಸ್ಟ್​ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಆ್ಯಂಗ್ರಿ ಯಂಗ್​ಮ್ಯಾನ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಒಳ್ಳೆ ಟೈಮ್ ಅಥವಾ ಅದೃಷ್ಟ ಯಾವ ಸಮಯದಲ್ಲಿ ಯಾವ ರೂಪದಲ್ಲಿ ಯಾರಿಗೆ ಸಿಗುತ್ತೋ ಅನ್ನೋದು ಗೊತ್ತಾಗಲ್ಲ ಆದರೆ ಒಮ್ಮೆ ಆ ಅವಕಾಶ ನಮ್ಮ ಜೀವನದಲ್ಲಿ ಬಂತು ಅಂದರೆ ಆಗ ನಡೆಯುವ ಬದಲಾವಣೆಗಳು ಊಹೆಗೂ ಮೀರಿದ್ದು. ಇದೀಗ ಇಂಥದ್ದೇ ಒಂದು ಟೈಮ್ ನಮ್ಮ ಕನ್ನಡಿಗ ದೇವ್​ದತ್ ಪಡಿಕ್ಕಲ್​​​ಗೆ ಒಲಿದು ಬಂದಿದೆ.

ಹೌದು, ಕರ್ನಾಟಕದ ಡೇರಿಂಗ್ ಬ್ಯಾಟರ್​ ದೇವ್​ದತ್ ಪಡಿಕ್ಕಲ್​​​​​ ಟೆಸ್ಟ್​ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಪಡಿಕ್ಕಲ್ ಇದೀಗ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟಕ್ಕೂ ಪಡಿಕ್ಕಲ್ ಆಯ್ಕೆ ಆಗಿದ್ದು ಹೇಗೆ? ರಾಜ್​ಕೋಟ್​ ಟೆಸ್ಟ್​​ನಿಂದ ಸ್ಟಾರ್ ಬ್ಯಾಟ್ಸ್​ಮನ್ ಕೆಎಲ್ ರಾಹುಲ್​ ಹೊರಬಿದ್ದಿದ್ದಾರೆ. ಕೆಲವೊಂದು ಕಾರಣಗಳಿಂದ ರಾಹುಲ್ ಹೊರಗುಳಿದಿದ್ದಾರೆ. ಆದರೆ ಆ ಸ್ಥಾನಕ್ಕೆ ಈಗ ಕನ್ನಡದ ಬ್ಯಾಟ್ಸ್ ಮ್ಯಾನ್ ದೇವ್​ದತ್ ಪಡಿಕ್ಕಲ್ ಟೀಮ್ ಇಂಡಿಯಾಗೆ ಸೇರಿಕೊಂಡಿದ್ದಾರೆ.

ಪಡಿಕ್ಕಲ್ ಆಯ್ಕೆ ಈಗಾಗಲೇ ಹಲವರಿಗೆ ಅಚ್ಚರಿ ಮೂಡಿಸಿದೆ. ಪಡಿಕ್ಕಲ್ ಇಷ್ಟು ಬೇಗ ಟೀಮ್ ಇಂಡಿಯಾ ಸೇರುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಇದೀಗ ದೇವ್​ದತ್ ಪಡಿಕ್ಕಲ್ ಎಂಟ್ರಿ ಗೆ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!