Tuesday, March 28, 2023

Latest Posts

ವಿಜಯಪುರದಲ್ಲಿ ರಸ್ತೆಗೆ ಬಂತು ಮೊಸಳೆ, ಸಾರ್ವಜನಿಕರಲ್ಲಿ ಭೀತಿ

ದಿಗಂತ ವರದಿ ವಿಜಯಪುರ:

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರ ಕೊಲ್ಹಾರ ಪಟ್ಟಣದ ಕೃಷ್ಣಾ ನದಿ ಸೇತುವೆ ಬಳಿ ಬಾಯಿಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದ್ದು, ಈ ಘಟನೆ ತೀವ್ರ ಕುತೂಹಲ ಮೂಡಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಕಾರಣ ಮೊಸಳೆಗಳು ನೀರು ಬಿಟ್ಟು ನದಿ ತೀರದ ತಂಪು ಪ್ರದೇಶಗಳಿಗೆ ಬರುವುದು ಸಾಮಾನ್ಯ. ಇದೇ ರೀರಿ ಬಂದ ಮೊಳೆಯನ್ನು ಯಾರಾದರೂ ಈ ರೀತಿ ಹಗ್ಗ ಬಿಗಿದು ಇಲ್ಲಿ ಬಿಟ್ಟು ಹೋಗಿರಬಹುದೇ ಎಂಬ ಅನುಮಾನ ನಾಗರಿಕನ್ನು ಕಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!