ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಎಲ್ಲರಿಗೂ ಬಿಸಿ ಬಿಸಿ ಮಿರ್ಚಿ ಬಜ್ಜಿಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ.
ಪ್ರಸಾದಕ್ಕಾಗಿ 25 ಕ್ವಿಂಟಾಲ್ ಕಡ್ಲೆಹಿಟ್ಟು, ಒಂಬತ್ತು ಬ್ಯಾರೆಲ್ ಅಡುಗೆ ಎಣ್ಣೆ ಹಾಗೂ 14 ಕ್ವಿಂಟಾಲ್ ಮೆಣಸಿನಕಾಯಿ ತರಲಾಗಿದೆ. 200ಕ್ಕೂ ಹೆಚ್ಚು ಬಾಣಸಿಗರು ಬಜ್ಜಿ ಮಾಡುವುದರಲ್ಲಿ ನಿರತರಾಗಿದ್ದಾರೆ.
ಅಜ್ಜನ ಜಾತ್ರೆ ಜನಸ್ತೋಮ ಹಾಗೂ ಬಜ್ಜಿ ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಭಾನುವಾರವೂ ಲಕ್ಷಾಂತರ ಮಂದಿ ದೇವರ ದರ್ಶನ ಪಡೆದಿದ್ದು, ಬಿಸಿ ಬಿಸಿ ಬಜ್ಜಿ ಪ್ರಸಾದ ಪಡೆದಿದ್ದಾರೆ.