ಬಿರಿಯಾನಿ ತಿನ್ನೋದ್ ತಿಂದ್ಬಿಟ್ಟು ದುಡ್ ಕೊಡಲ್ಲ ಅಂದ‌ ಆಸಾಮಿ, ಮುಂದೇನಾಯ್ತು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಹೋಟೆಲ್‌ ನಲ್ಲಿ ಬಿರಿಯಾನಿ ತಿಂದ ಗ್ರಾಹಕರಿಂದ ಬಿಲ್‌ ಪಾವತಿ ಮಾಡುವಂತೆ ಕೇಳಿದಕ್ಕೆ ವೇಟರ್‌ಗೆ ನಾಲ್ವರು ಅಮಾನುಷವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ನಡೆದಿದೆ.

ಈ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ.

ಬುಧಾರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಝಾ ಹೈದರಾಬಾದಿ ಹೋಟೆಲ್‌ ಗೆ ನಾಲ್ವರು ಆಗಮಿಸಿದ್ದರು. ಬಳಿಕ ಬಿರಿಯಾನಿ ತಿಂದರು, ಬಿಲ್‌ ಕೊಡಿ ಎಂದು ವೇಟರ್‌ ಕೇಳಿದ್ರೆ ಅವರ ಮೇಲೆ ದೌರ್ಜನ್ಯ ತೋರಿದ್ದಾರೆ.

ಈ ವೇಳೆ ಕುರ್ಚಿಗಳು, ದೊಣ್ಣೆ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ತೆಗೆದುಕೊಂಡು ವೇಟರ್‌ ಮೇಲೆ ಎಸೆದಿದ್ದಾರೆ. ಈ ಘಟನೆಯು ಹೋಟೆಲ್‌ ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂತ್ರಸ್ತ ವೇಟರ್‌ ಪ್ರಕಾಶ್‌ ರಾಜ್‌ ದೂರು ದಾಖಲಿಸಿದ ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!