ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿನ್ನಿಗೋಳಿ ಸಮೀಪದ ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಎಂಬಾತ ತನ್ನ ಪತ್ನಿ ಹಾಗೂ ಮೂರು ಮಕ್ಕಳನ್ನು ಬಾವಿಗೆ ದೂಡಿ ತಾನೂ ಆತ್ಮಹತ್ಯೆ ಯತ್ನ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಮೃತಪಟ್ಟಿದ್ದರು. ತಂದೆ ತಾಯಿಯರನ್ನು ಸ್ಥಳೀಯರು ಮೇಲಕ್ಕೆತ್ತಿ ಬಚಾವ್ ಮಾಡಿದ್ದರು.
ಹಿತೇಶ್ನ ಮಾನಸಿಕ ಖನ್ನತೆ ಮೌನ, ಅರ್ಥಿಕ ಮುಗ್ಗಟ್ಟು ಮೂರು ಮಕ್ಕಳನ್ನು ಬಲಿಪಡೆಯಿತೇ ಎಂಬುದು ಸ್ಪಷ್ಟವಿಲ್ಲ.
ಕಟೀಲು ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೃತ ರಶ್ಮಿತಾ ಸ್ಮರಣಾರ್ಥ ರಜೆ ಸಾರಲಾಯಿತು. ಅದೇ ರೀತಿಯಲ್ಲಿ ಉದಯ ಹೊಗುತ್ತಿದ್ದ ಪುನರೂರು ಶಾಲೆ, ಅಂಗನವಾಡಿಗೆ ಹೋಗುತ್ತಿದ್ದ ದಕ್ಷನ, ಪದ್ಮನೂರು ಅಂಗನವಾಡಿ ಶಾಲೆಗೆ ರಜೆ ಸಾರಲಾಗಿತ್ತು. ಮಕ್ಕಳ ಅಂತ್ಯ ಸಂಸ್ಕಾರ ಶುಕ್ರವಾರ ಮಧ್ಯಾಹ್ನದ ನಡೆಸಲಾಯಿತು.
ಶವದ ಪಕ್ಕ ಕೇಕ್ ಇಟ್ಟು ಅಂತ್ಯಕ್ರಿಯೆ
ಜೂ.28 ರಂದು ಎರಡನೇ ಪುತ್ರ ಉದಯನ ಹುಟ್ಟು ಹಬ್ಬಕ್ಕೆ ಮುಂಗಡವಾಗಿ ಕಿನ್ನಿಗೋಳಿಯ ಬೇಕರಿಯಲ್ಲಿ ಕೇಕ್ ಬುಕ್ ಮಾಡಲಾಗಿತ್ತು. ಮೃತಪಟ್ಟ ಉದಯನ ಶವದ ಪಕ್ಕ ಕೇಕ್ ಹಾಗೂ ಹೊಸ ಬಟ್ಟೆಯನ್ನು ಅಂತಿಮ ಸಂಸ್ಕಾರದ ಸಮಯಲ್ಲಿ ಇಡಲಾಗಿತ್ತು.
ಮೂವರು ಮಕ್ಕಳ ಸಾವಿಗೆ ಕಾರಣನಾದ ತಂದೆ ಹಿತೇಶ್ ಶೆಟ್ಟಿಗಾರ್ನನ್ನು ಪೋಲೀಸರು ಬಂಧಿಸಿದ್ದು, ಮಕ್ಕಳನ್ನೂ ಕಳೆದುಕೊಂಡು ಒಂಟಿಯಾಗಿರುವ ತಾಯಿ ಲಕ್ಷ್ಮೀಯ ಆರ್ತನಾದ ಕಂಡವರೆಲ್ಲರ ಕಣ್ಣಲ್ಲೂ ನೀರು ತಂದಿತು.