ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸ್ಕೂಟರ್‌ಗೆ ಬೆಂಕಿ: ಇಬ್ಬರಿಗೆ ತೀವ್ರ ಗಾಯ

ಹೊಸದಿಗಂತ ವರದಿ, ಶ್ರೀರಂಗಪಟ್ಟಣ :

ಚಲಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪ ಕೆಳಗೆ ಬಿದ್ದು ಪೆಟ್ರೋಲ್ ಸುರಿದ ಪರಿಣಾಮ ಕ್ಷಣಾರ್ಧದಲ್ಲೆ ಸ್ಕೂಟರ್ ಹೊತ್ತಿ ಹುರಿದ ಘಟನೆ ತಾಲೂಕಿನ ದರಸಗುಪ್ಪೆ ಬಳಿ ನಡೆದಿದೆ.
ಮೈಸೂರು ಮೂಲದ ಶಿವರಾಮು ಬಿನ್ ಲೇಟ್ ನಾರಾಯಣ (73) ಹಾಗೂ ಅನಂತರಾಮು ಬಿನ್ ಲೇಟ್ ವಾಸುವೇವಮೂರ್ತಿ (50) ಅಪಘಾತಕ್ಕೀಡಾದ ವ್ಯಕ್ತಿಗಳು. ಈ ಇಬ್ಬರು ತಮ್ಮ ಸಂಬಂಧಿಕರ ಗೃಹ ಪ್ರವೇಶ ನಿಮಿತ್ತ ಜುಪಿಟರ್ ಸೂಟರ್‌ನಲ್ಲಿ ಮೈಸೂರಿನಿಂದ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದಸರಗುಪ್ಪೆ ಬಳಿ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಬಿದ್ದ ರಬಸಕ್ಕೆ ರಸ್ತೆ ಸ್ಕೂಟರ್‌ನಿಂದ ಪೆಟ್ರೋಲ್ ಸುರಿದ ಪರಿಣಾಮ ಏಕಾಏಕಿ ಹೊತ್ತಿಕೊಂಡು, ಸಂಪೂರ್ಣವಾಗಿ ಬಸ್ಮವಾಗಿದೆ. ಘಟನೆಯಿಂದ ಶಿವರಾಮು ಸ್ಕೂಟರ್ ಕೆಳಗೆ ಸುಲುಕಿಹಾಕಿಕೊಂಡ ಪರಿಣಾಮ ಅವರ ದೇಹ ಬಾಗಶಃ ಸುಟ್ಟು ಹೋಗಿದ್ದು, ಅನಂತರಾಮು ಅವರಿಗೆ ಎಡಗಾಲು ಮುರಿತಗೊಂಡಿದೆ ಎಂದು ತಿಳಿದು ಬಂದಿದೆ. ಸಹ ಪ್ರಯಾಣಿಕರು ಹಾಗೂ ಸ್ಥಳೀಯರು ಶಿವರಾಮು ಅವರನ್ನು ಬೆಂಕಿ ಜ್ವಾಲೆಯಿಂದ ಎಳೆದು ಬಟ್ಟೆಯಿಂದ ಬಡಿದು ಬೆಂಕಿ ಹಾರಿಸಿ ಆಂಬ್ಯೂಲೆಸ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!