ಈ ರಾಶಿಯವರಿಗೆ ಕಾದಿದೆ ನೆರೆಯವರೊಂದಿಗೆ ವಾಗ್ವಾದ!

 

ಮೇಷ
ಕೆಲವು ಸಂಗತಿಗಳು ನೀವು ಬಯಸಿದಂತೆ ಸಾಗುವುದಿಲ್ಲ.  ಇದು ನಿಮ್ಮನ್ನು ಹತಾಶೆಗೆ ದೂಡಬಹುದು. ಆದರೆ ನಿಮ್ಮ ಉತ್ಸಾಹ ಕಳಕೊಳ್ಳದಿರಿ.

ವೃಷಭ
ಆಪ್ತರೆನಿಸಿದವರೇ ನಿಮ್ನನ್ನು ದೂರ ಬಹುದು. ಅವರ ಅವಕೃಪೆಗೆ ತುತ್ತಾಗುವಿರಿ. ನಿಮ್ಮ ನಡತೆಯನ್ನೂ ಪರಾಮರ್ಶೆಗೆ ಒಡ್ಡಿಕೊಳ್ಳಿ.

ಮಿಥುನ
ನೆರೆಕರೆಯಲ್ಲಿ ಬಾಂಧವ್ಯ ಕೆಡಬಹುದು. ವಾಗ್ವಾದ ನಡೆದೀತು. ನಿಮ್ಮ ಸಹನೆ ಕಳಕೊಳ್ಳದಿರಿ. ಕೌಟುಂಬಿಕ ಬೇಡಿಕೆಗಳು ನಿಮ್ಮ ನಿರೀಕ್ಷೆಯನ್ನು ಮೀರಬಹುದು.

ಕಟಕ
ಭಾವನಾತ್ಮಕ ಸಂಘರ್ಷ ಎದುರಿಸುವಿರಿ. ಸಂಕೀರ್ಣ ವಿಷಯದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗದ ಸಂದಿಗ್ಧತೆ. ಯೋಚಿಸಿ ಹೆಜ್ಜೆಯಿಡಿ.

ಸಿಂಹ
ನಿಮ್ಮ ಸುತ್ತಲಿನವರ ವರ್ತನೆ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದು. ಮನಶ್ಯಾಂತಿ ಕಲಕಬಹುದು.

ಕನ್ಯಾ
ವೃತ್ತಿಯಲ್ಲಿ ಏರುಪೇರು ಅನುಭವಿಸುವಿರಿ. ಕೆಲವು ಬೆಳವಣಿಗೆ ನಿಮಗೆ ಪೂರಕವಾಗಿ ಸಾಗಲಾರದು. ಹತಾಶೆ ಬೇಡ. ಬೇಗನೆ ಎಲ್ಲ ಸರಿಹೋಗುವುದು.

ತುಲಾ
ಮುಂಜಾನೆಯಿಂದಲೆ ಜಡತ್ವ ಆವರಿಸುವುದು. ಕಾರ್ಯದಲ್ಲಿ ನಿರುತ್ಸಾಹ. ಮುಖ್ಯ ಕೆಲಸಗಳೂ ಪೂರ್ಣ ಗೊಳ್ಳದೆ ಬಾಕಿ ಉಳಿಯಬಹುದು.

ವೃಶ್ಚಿಕ
ಮನಸ್ಸಿಗೆ ನೋವು ತರುವ ಬೆಳವಣಿಗೆ ಸಂಭವಿಸುವುದು. ಅದಕ್ಕೆ ಇತರರು ನಿಮ್ಮ ಮೇಲೆ ತೋರುವ ನಿರಾಸಕ್ತಿಯೂ ಕಾರಣವಾದೀತು. ಸಂಯಮವಿರಲಿ.

ಧನು
ಕೆಲಸದ ಕುರಿತಂತೆ ಪೂರ್ಣ ಕಾಳಜಿಯಿರಲಿ. ಅರೆಮನಸ್ಸಿನ ಕಾರ್ಯ ಮಾಡಬೇಡಿ. ಬಂಧುಗಳಿಂದ ನಿಮಗೆ ಹರ್ಷ ತರುವ ಸುದ್ದಿ ಬರಬಹುದು.

ಮಕರ
ಹೊಸ ವ್ಯವಹಾರ ಆರಂಭಿಸುವ ಮುನ್ನ ಸರಿಯಾದ ಯೋಜನೆ ಹಾಕಿಕೊಳ್ಳಿ. ಸಹೋದ್ಯೋಗಿಗಳ ಜತೆ ಮನಸ್ತಾಪ, ವಾಗ್ವಾದ ನಡೆಯಬಹುದು.

ಕುಂಭ
ಕೌಟುಂಬಿಕ ಪರಿಸ್ಥಿತಿಗೆ ಇಂದು ಆದ್ಯತೆ ಕೊಡುವುದು ಒಳಿತು. ಮನೆಯೊಳಗಿನ ಕೆಲವು ವಿಷಯಗಳನ್ನು ಸರಿಪಡಿಸಲು ಮುಂದಾಗಿರಿ.

ಮೀನ
ಕೆಲವರನ್ನು ಮೆಚ್ಚಿಸಲು ಹೋಗಿ, ನಿಮ್ಮ ಆಪ್ತರನ್ನೇ ನೋವಿಗೆ ತಳ್ಳಬೇಡಿ. ಅವರ ಭಾವನೆಯನ್ನೂ ಅರ್ಥ ಮಾಡಿಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!