ಹೊಸದಿಗಂತ ವರದಿ, ಹುಬ್ಬಳ್ಳಿ
ಎಲೆಕ್ಟ್ರಿಕ್ ಲೈನ್ ಪರೀಕ್ಷಿಸುವ ಟವರ್ ಕಾರ್ ಎಂಜಿನ್ ಕುಂದಗೋಳ ತಾಲೂಕು ಗುಡಿಗೇರಿ ಸಂಶಿ ನಡುವೆ ಕೆಟ್ಟುನಿಂತು ರೈಲು ಸಂಚಾರಕ್ಕೆ ಅಡಚಣೆಯಾದ ಪರಿಣಾಮ ಶುಕ್ರವಾರ ರಾತ್ರಿ ರೈಲುಗಳಲ್ಲಿನ ಪ್ರಯಾಣಿಕರು ಆಹಾರ, ನೀರಿಗಾಗಿ ತೀವ್ರ ಪರದಾಡಿದರು. ನೆರವಿಗೆ ಧಾವಿಸಿದ ನೈಋತ್ಯ ರೈಲ್ವೆ ಅಧಿಕಾರಿಗಳು, ಪ್ರಯಾಣಿಕರನು ನಿಗದಿತ ಸ್ಥಳಕ್ಕೆ ರವಾನಿಸಲು ಬಸ್ ವ್ಯವಸ್ಥೆ ಮಾಡಿದ್ದಾರೆ.
ಜೊತೆಗೆ ಹುಬ್ಬಳ್ಳಿ ಯಿಂದ ಆಹಾರ ಪೂರೈಕೆ ಮಾಡಿದ್ದಾರೆ. ಇತ್ತ ಪ್ರಯಾಣಿಕರು ಸಂಕಷ್ಟದಲ್ಲಿರುವ ಮಾಹಿತಿ ಪಡೆದ ಕುಂದಗೋಳ ಪೊಲೀಸ್ ಠಾಣೆಯ ಸಿಪಿಐ ದೇಶನೂರು ಹಾಗೂ ಪೊಲೀಸ್ ಸಿಬ್ಬಂದಿಗಳು ತಕ್ಷಣವೇ ಪ್ರಯಾಣಿಕರ ನೆರವಿಗೆ ಬಂದಿದ್ದಾರೆ.
ಕುಂದಗೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಇರುವ ಬಸ್ ಗಳನ್ನು ಗುಡಿಗೇರಿ ಹಾಗೂ ಸಂಶಿ ರೈಲು ನಿಲ್ದಾಣಕ್ಕೆ ಪ್ರಯಾಣಿಕರನ್ನು ಹುಬ್ಬಳ್ಳಿಗೆ ಕರೆದೊಯ್ಯಲು ಬಸ್ ನಿಲ್ದಾಣದ ಸಿಬ್ಬಂದಿಯೊಂದಿಗೆ ಚರ್ಚಿಸಿ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ