ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಸಭೆ ನಡೆಸಿ ಮತ ಯಾಚನೆ ಮಾಡುತ್ತಿದ್ದರೆ, ಸೊಸೆ ಅಂದರೆ ಕಾಂತೇಶ್ ಅವರ ಪತ್ನಿ ಶಾಲಿನಿ ಕರಪತ್ರಗಳನ್ನು ಹಂಚುತ್ತಾ ಮತ ಕೇಳುತ್ತಿದ್ದಾರೆ.
ಜನರ ಪ್ರತಿಕ್ರಿಯೆ ನೋಡಿದರೆ ಈಶ್ವರಪ್ಪ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಶಿವಮೊಗ್ಗ ಪ್ರತಿನಿಧಿಯನ್ನು ಮಾತನಾಡಿಸಿದಾಗ ತಮ್ಮ ಮಾವ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಈ ಸಕಾರಾತ್ಮಕ ಸ್ಪಂದನೆ ಜನರಲ್ಲಿ ಆತ್ಮಸ್ಥೈರ್ಯ ಹಾಗೂ ವಿಶ್ವಾಸವನ್ನು ಹೆಚ್ಚಿಸಿದ್ದು, ಧೈರ್ಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸಿದೆ ಎಂದರು.
ಈಶ್ವರಪ್ಪನವರು ತನಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದ ಶಾಲಿನಿ, ಯಾವುದೇ ಕೆಲಸಕ್ಕಾಗಿ ಹೋದರೂ ಅವರು ಅದನ್ನು ಮಾಡಿಕೊಟ್ಟಿದ್ದಾರೆ ಎಂದು ಜನ ಹೇಳುತ್ತಿದ್ದಾರೆ, ಈಶ್ವರಪ್ಪ ಅವರು ಹೊಂದಿರುವ ಚಿಹ್ನೆಯ ಬಗ್ಗೆ ಜನರಿಗೆ ಗೊಂದಲವಿಲ್ಲ. ತಾನೊಬ್ಬ ಕಬ್ಬು ಕೃಷಿಕ ಎಂದು ಹೇಳುತ್ತಾರೆ. ಬಿಜೆಪಿ ಯಾವಾಗಲೂ ತನ್ನ ಕುಟುಂಬಕ್ಕೆ ತಾಯಿಯಂತೆ ಎಂದು ಶಾಲಿನಿ ಹೇಳಿದ್ದಾರೆ.