ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧ ಗುಡುಗಿದ ಪುತ್ರಿ ಸೀರತ್ ಕೌರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಅವರ ಪುತ್ರಿ ಸೀರತ್ ಕೌರ್ ಮಾನ್ ಗಂಭೀರ ಆರೋಪ ಮಾಡಿದ್ದಾರೆ.

ಮಾನ್ ತಂದೆ ಎಂದು ಕರೆಯುವ ಹಕ್ಕನ್ನು ಕಳೆದುಕೊಂಡಿದ್ದರಿಂದ ಅವರನ್ನು ಸಿಎಂ ಮಾನ್ ಎಂದು ಕರೆಯುತ್ತೇನೆ. ನಾನು ಈ ವಿಡಿಯೋ ಮಾಡುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ನನ್ನ ಕಥೆ ಹೊರಬರಲಿ ಎಂದು ನಾನು ಬಯಸುತ್ತೇನೆ. ಜನರು ನಮ್ಮ ಬಗ್ಗೆ ಏನು ಕೇಳಿದ್ದಾರೆಯೋ ಅದನ್ನು ಸಿಎಂ ಮಾನ್ ಅವರೇ ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಾನು , ತಾಯಿ ಇಲ್ಲಿಯವರೆಗೆ ಮೌನವಾಗಿದ್ದುರೆ. ನಮ್ಮ ಮೌನವನ್ನು ನಮ್ಮ ದೌರ್ಬಲ್ಯವೆಂದು ಅವರು ಭಾವಿಸಿದ್ದಾರೆ. ನಮ್ಮ ಮೌನದಿಂದಾಗಿ ಅವರು ಪ್ರಸ್ತುತ ಉನ್ನತ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ಅವರಿಗೆ ತಿಳಿದಿಲ್ಲ ಎಂದಿದ್ದಾರೆ.

ಜೊತೆಗೆ ಸಿಎಂ ಮಾನ್ ಪತ್ನಿ ಡಾ.ಗುರುಕಿರತ್ ಗರ್ಭಿಣಿಯಾಗಿದ್ದು, ಸಿಎಂ ಮಾನ್ ಮೂರನೇ ಬಾರಿಗೆ ತಂದೆಯಾಗಲಿದ್ದಾರೆ ಎಂದು ಸೀರತ್ ಮಾಹಿತಿ ನೀಡಿದ್ದಾರೆ. ಈ ವಿಚಾರ ಬೇರೆಯವರಿಂದ ತಿಳಿಯಿತು. ಮಾನ್ ತನಗೆ ಅಥವಾ ಸಹೋದರನಿಗೆ ಈ ಬಗ್ಗೆ ತಿಳಿಸಲು ಯಾವುದೇ ಕಾಳಜಿ ವಹಿಸಲಿಲ್ಲ ಎಂದು ಸೀರತ್ ಬೇಸರ ವ್ಯಕ್ತಪಡಿಸಿದ್ದಾರೆ.

ಮ್ಯಾನ್… ನಿಮಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ನೀವು ಅವರನ್ನು ನಿರ್ಲಕ್ಷಿಸಿದ್ದೀರಿ ಮತ್ತು ಈಗ ಮೂರನೇ ಮಗುವನ್ನು ಈ ಜಗತ್ತಿಗೆ ತರಲು ಬಯಸಿದ್ದೀರಿ. ಇದಕ್ಕೆ ಕಾರಣವೇನು ಎಂದು ತಂದೆಯನ್ನು ಪ್ರಶ್ನಿಸಿದ್ದಾರೆ.

ಭಗವಂತ್ ಮಾನ್ ಪುತ್ರ ದೋಷನ್ ತಂದೆಯನ್ನು ಭೇಟಿ ಮಾಡಲು ಎರಡು ಬಾರಿ ಪಂಜಾಬ್‌ಗೆ ಹೋಗಿದ್ದರು. ಅವನು ತನ್ನ ತಂದೆಯೊಂದಿಗೆ ಸಮಯ ಕಳೆಯಲು ಬಯಸುತ್ತಾನೆ. ಆದರೆ ಸಿಎಂ ತಮ್ಮ ಮನೆಗೆ ಬರಲು ದೋಷನ್‌ಗೆ ಅವಕಾಶ ನೀಡಲಿಲ್ಲ. ನಂತರ ಅವರು ಕುಟುಂಬದ ಸ್ನೇಹಿತರೊಂದಿಗೆ ಚಂಡೀಗಢದಲ್ಲಿ ಉಳಿದುಕೊಂಡರು. ಒಂದು ದಿನ ಅವರು ಮತ್ತೆ ಸಿಎಂ ಮಾನ್ ಮನೆಗೆ ಹೋದರು. ಆ ಸಂದರ್ಭದಲ್ಲಿ ಅವನನ್ನು ಮನೆಯಿಂದ ಹೊರಹಾಕಲಾಯಿತು ಮತ್ತು ಅಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಹೇಳಿ ಅಲ್ಲಿಂದ ಹೊರಡಲು ಹೇಳಿದರು. ತನ್ನ ಸ್ವಂತ ಮಕ್ಕಳ ಜವಾಬ್ದಾರಿಯನ್ನು ಹೊರಲಾಗದ ವ್ಯಕ್ತಿ ಪಂಜಾಬ್ ಜನತೆಯ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎಂದು ಆರೋಪಿಸಿದ್ದಾರೆ.

ನಾವು ನೋಡಿದ್ದೆಲ್ಲ ಪಂಜಾಬ್‌ನ ಜನರಲ್ಲೂ ನಡೆಯುತ್ತಿದೆ. ಸಿಎಂ ಮಾನ್ ಅವರು ರಾಜಕೀಯಕ್ಕೆ ಹೋಗಬಾರದು ಎಂದು ತಾಯಿ ಬಯಸಿದ್ದರು ಎಂದು ಭಗವಂತ್ ಮಾನ್ ವಿಚ್ಛೇದನಕ್ಕೆ ಕಾರಣ ನೀಡಿದ್ದರು. ವಿಚ್ಛೇದನಕ್ಕೆ ಹಲವು ಕಾರಣಗಳಿವೆ ಮತ್ತು ಅದು ನನ್ನ ತಾಯಿಯೇ ಹೇಳುತ್ತಾರೆ. ಯಾವಾಗ ನನ್ನ ತಾಯಿ ಈ ಸತ್ಯ ಹೇಳಲು ಸಿದ್ಧರಾಗುತ್ತಾರೋ ಅವತ್ತು ಖಂಡಿತವಾಗಿಯೂ ಎಲ್ಲರಿಗೂ ತಮ್ಮ ಕಥೆಯನ್ನು ಹೇಳುತ್ತಾರೆ ಎಂದು ಸೀರತ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಮಾನ್ ಮತ್ತು ತನ್ನ ತಾಯಿಯ ವಿಚ್ಛೇದನಕ್ಕೆ ತಂದೆಯ ಮದ್ಯಪಾನ, ಮಾನಸಿಕ ಮತ್ತು ದೈಹಿಕ ಕಿರುಕುಳ, ಸುಳ್ಳು ಹೇಳುವ ಅಭ್ಯಾಸ ಮತ್ತು ಬೆದರಿಕೆಗಳು ಕೆಲವು ಕಾರಣ ಎಂದು ಹೇಳಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!