ಮದ್ಯ ವ್ಯಸನ ಬಿಡಿಸುವ ಔಷಧಿ ಸೇವಿಸಿ ಪುಟ್ಟ ಬಾಲಕ ಸಾವು

ಹೊಸದಿಗಂತ ವರದಿ,  ಕಲಬುರಗಿ
ಮದ್ಯ ವ್ಯಸನದ ಚಟ ಬಿಡಿಸುವ ಔಷಧಿ ಸೇವಿಸಿ ಪುಟ್ಟ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ (08) ಮೃತ ಬಾಲಕ. ಬಾಲಕನ ತಂದೆಗೆ ಮದ್ಯ ಸೇವನೆಯ  ಚಟವಿತ್ತು. ಅದನ್ನು ಬಿಡಿಸಲು ಮಿರ್ಚಿ ಬಜ್ಜಿಯಲ್ಲಿ ಔಷಧಿ ಮಿಶ್ರಣ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಅದೇ ಔಷಧಿ ಮಿಶ್ರಣ ಮಾಡಿ ಇಡಲಾಗಿದ್ದ ಮಿರ್ಚಿ ಬಜ್ಜಿ ಸೇವನೆಸಿದ ಬಾಲಕ ಅಸುನೀಗಿದ್ದಾನೆ. ಅತಿಯಾದ ವಾಂತಿ ಭೇದಿಯಿಂದ ಬಾಲಕ  ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ಹೇಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!