ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾನುವಾರುಗಳಿಗೆ ತಗಲುತ್ತಿರುವ ಗಂಟು ಚರ್ಮರೋಗ ಖಾಯಿಲೆಯಿಂದ ಆತಂಕ ಹೆಚ್ಚಾಗುತ್ತಿದ್ದು, ಹಸುಗಳು ಸಾಯುತ್ತಿದೆ. ಈ ವಿಚಾರದ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೋಗ ಪತ್ತೆ ಮಾಡಿ ಲಸಿಕೆ ಕೊಡಬೇಕು, ಮೃತಪಟ್ಟ ಹಸುಗಳ ಮಾಲೀಕರಿಗೆ 50,000 ರೂ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಗಂಟು ಚರ್ಮರೋಗದಿಂದ ಜಾನುವಾರುಗಳು ಸಾಯುತ್ತಿದೆ. ಸಾವಿನ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ, ಹಸು ಸತ್ತರೆ 20 ಸಾವಿರ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಸತ್ತ ಹಸುಗಳ ಮರಣೋತ್ತರ ಪರೀಕ್ಷೆಗೆ ವೈದ್ಯರೇ ಇಲ್ಲ, ಇನ್ನೂ ನೀವು ಹೇಗೆ ರೋಗ ಪತ್ತೆ ಹಚ್ಚುತ್ತೀರಾ ಎಂದು ಹೆಚ್ಡಿಕೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ಸರ್ಕಾರ ಕೂಡಲೇ ಈ ಬಗ್ಗೆ ಮುತುವರ್ಜಿ ವಹಿಸಿ ರೋಗ ಪತ್ತೆ ಮಾಡಬೇಕು. ಪತ್ತೆ ಮಾಡಿ ಲಸಿಕೆ ನೀಡಬೇಕು, ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.