ಹೊಸದಿಗಂತ ಡಿಜಿಟಲ್ ಡೆಸ್ಕ್
ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ ಮತ್ತು ಸುಲಿಗೆ ಕೆರೆಗಳು ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೂನ್ 24ರಿಂದ 28 ರವರೆಗೆ ಬೆದರಿಕೆ ಕರೆಗಳು ಬಂದಿದ್ದು, ಈ ಕುರಿತು ಪತ್ತೆಹಚ್ಚುವ ವೇಳೆ ಮಧ್ಯಪ್ರಾಚ್ಯದ ದೇಶಗಳ ವಿವಿಧ ದೂರವಾಣಿ ಸಂಖ್ಯೆಗಳಿಂದ ಬಂದಿರುವುದು ಗೊತ್ತಾಗಿದೆ .
ದೂರವಾಣಿ ಸಂಖ್ಯೆಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೋಂದಾಯಿಸಲಾಗಿದೆ ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಮೊಬೈಲ್ಗಳ ತಾಂತ್ರಿಕ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಈ ಬೆದರಿಕೆ ಕೆರೆಗಳ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ಮಾಡಲಾಗಿದೆ.
ಇನ್ನು ಇದೇ ಸಂಖ್ಯೆಗಳಿಂದ ಪಂಜಾಬ್ನ ಕೆಲವು ಮಾಜಿ ಶಾಸಕರಿಗೂ ಬೆದರಿಕೆ ಕೆರೆಗಳು ಬಂದಿವೆ. ಶಾಸಕರೊಂದಿಗಿನ ಸಂಭಾಷಣೆಯ ಸಮಯದಲ್ಲಿ ಮುಂಬೈಕರ್ ಮತ್ತು ಪಂಜಾಬಿ ಭಾಷೆಯಂತಹ ವಿಭಿನ್ನ ಸ್ವರಗಳು ಮತ್ತು ಸಂಭಾಷಣೆಯ ಶೈಲಿಗಳನ್ನು ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣಗಳ ತನಿಖೆಗಾಗಿ ಐಜಿಪಿ (ಎಸ್ಟಿಎಫ್) ಸತೀಶ್ ಬಾಲನ್ ಅವರು ಎಸ್ಪಿ ಸುಮಿತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಎರಡು ವಾರಗಳ ಕಾಲ ನಡೆದ ಈ ತನಿಖೆ ಮೇಲೆ ಡಿಜಿಪಿ ಅಗರವಾಲ್ ಖುದ್ದು ನಿಗಾ ವಹಿಸಿದ್ದರು.
ಇದೇ ಬೆದರಿಕೆ ಕೆರೆಗಳ ವಿಷಯವಾಗಿ ಜುಲೈ 19ರಂದು ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.