ರೈತರಿಂದ ದೆಹಲಿ ಚಲೋ: ಶಂಭು ಗಡಿಯಲ್ಲಿ ಪೊಲೀಸರಿಂದ ಅಶ್ರುವಾಯು ಪ್ರಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹು ಬೇಡಿಕೆಗಳೊಂದಿಗೆ ರೈತರು ದೆಹಲಿ ಚಲೋ ಆರಂಭಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪಂಜಾಬ್‌ನಿಂದ ಮೆರವಣಿಗೆ ಆರಂಭವಾಗಿದ್ದು, ಗಡಿಗಳಲ್ಲಿ ಮೊಳೆ, ಬ್ಯಾರಿಕೇಡ್, ಕಲ್ಲು ಹಾಗೂ ತಂತಿಗಳನ್ನು ಹಾಕಿ ತಡೆಯಲಾಗಿದೆ.

ಪ್ರತಿಭಟನಾಕಾರರ ಎರಡು ಗಂಟೆಗಳ ಪ್ರತಿಭಟನೆ ನಂತರ ಶಂಭು ಗಡಿಯಲ್ಲಿ ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಅಧಿಕಾರಿಗಳೊಂದಿಗೆ ಯಾವುದೇ ಸಂಘರ್ಷ ಮಾಡುವುದಿಲ್ಲ. ನಮ್ಮ ಹಕ್ಕಿನಂತೆ ಪ್ರತಿಭಟನೆ ಮಾಡಲು ಅವಕಾಶ ಕೊಡಿ ಎಂದು ರೈತರು ಹೇಳಿದ್ದಾರೆ.

ಪಂಜಾಬ್ ಹರಿಯಾಣ ನಡುವಿನ ಗಡಿಗಳು ಬೇರೆ ದೇಶದ ಗಡಿಗಳಂತೆ ಕಾಣುತ್ತಿವೆ. ನಾವು ರಸ್ತೆ ತಡೆ ಮಾಡುತ್ತೇವೆಂದು ತಿಳಿದುಕೊಂಡು ಎರಡು ದಿನಗಳಿಂದ ಸರ್ಕಾರವೇ ರಸ್ತೆ ತಡೆ ಮಾಡಿಲ್ಲ ಎಂದು ಪ್ರತಿಭಟನಾನಿರತ ರೈತರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!