ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಬಿಆರ್ಎಸ್ ನಾಯಕಿ ಕೆ. ಕವಿತಾ ಇಡಿ ಕಸ್ಟಡಿಯನ್ನು ಮಾ.26ರ ತನಕ ವಿಸ್ತರಿಸಲಾಗಿದೆ.
ಮಾ.15ರಂದು ಬಂಧನಕ್ಕೊಳಗಾದ ಕವಿತಾರನ್ನು ಮಾ.23ರ ತನಕ ಇಡಿ ಕಸ್ಟಡಿಗೆ ಒಪ್ಪಿಸಲಾಗ್ತಿತು. ಇದೀಗ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕವಿತಾರನ್ನು ಶನಿವಾರ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಅವಶ್ಯಕತೆ ಮನಗಂಡ ನ್ಯಾಯಾಲಯ ಕಸ್ಟಡಿ ಅವಧಿಯನ್ನು ಮಾ. 26ಕ್ಕೆ ವಿಸ್ತರಿಸಿದೆ.